ನಾಳೆ ಮಧುರ ಗಾನ ಸಂಭ್ರಮ ಕಾರ್ಯಕ್ರಮ

Varta Mitra News

ಬೆಂಗಳೂರು, ಜೂ.10- ಹಿನ್ನೆಲೆ ಗಾಯಕ ಶ್ರೀನಾಥ ಭಾರದ್ವಾಜ್ ಅರವ ಶೃತಿ, ಲಯ, ಸಂಗೀತ ಕಲ್ಚರಲ್ ಅಕಾಡೆಮಿ ವತಿಯಿಂದ ನಾಳೆ ಸಂಜೆ 4.30ಕ್ಕೆ ಮಲ್ಲೇಶ್ವರಂನ ಎಮ್‍ಎಲ್‍ಎ ಕಾಲೇಜು ಎದುರು ಇರುವ ಸೇವಾ ಸದನದಲ್ಲಿ ಮಧುರ ಗಾನ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿರ್ಮಾಪಕ ಮತ್ತು ಕಲಾವಿದೆ ಹರಿಣಿ ಎಸ್.ರಾವ್ ಮತ್ತು ಅಭಿನಯ ಶಾರದೆ ಡಾ.ಜಯಂತಿ ಅವರ ಉಪಸ್ಥಿತಿಯಲ್ಲಿ ವಿಶೇಷ ಜನಪ್ರಿಯ ಗೀತೆಗಳ ರಸಸಂಜೆ ನಡೆಯಲಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಸಿ.ಎನ್.ಅಶ್ವಥ್ ನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ.ನಿವೃತ್ತ ಪೆÇಲೀಸ್ ಅಧಿಕಾರಿ ಬಿ.ಕೆ.ಶಿವರಾಮ್, ನಿರ್ಮಲ್‍ಕುಮಾರ್ ಸುರಾನಾ, ವಿನಾಯಕ ಭಟ್, ನಿರ್ಮಾಪಕ ಮತ್ತು ನಿರ್ದೇಶಕ ಶ್ರೀದರ್ಶನ ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ