ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟ ರವಿಚಂದ್ರನ್‍ರವರ ಸುಪುತ್ರಿ

ಬೆಂಗಳೂರು,ಮೇ 28- ಸ್ಯಾಂಡಲ್‍ವುಡ್‍ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸುಪುತ್ರಿ ಗೀತಾಂಜಲಿ(ಅನು) ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಕನಸುಗಾರ ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಏಕೈಕ ಪುತ್ರಿಯಾಗಿರುವ ಗೀತಾಂಜಲಿ ಉದ್ಯಮಿ ಅಜಯ್ ಅವರನ್ನು ವರಿಸಲಿದ್ದಾರೆ.

ಇಂದು ಸಂಜೆ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯ ವೈಟ್ ಪೆಟಲ್‍ನಲ್ಲಿ ಅದ್ಧೂರಿಯಾಗಿ ಅರತಕ್ಷತೆ ನಡೆಯಲಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಶುಭ ಲಗ್ನದಲ್ಲಿ ಮುಹೂರ್ತ ನೆರವೇರಲಿದ್ದು, ಸ್ಯಾಂಡಲ್‍ವುಡ್ ಸೇರಿದಂತೆ ಬಾಲಿವುಡ್, ತಾಲಿವುಡ್, ಮಾಲಿವುಡ್‍ನ ಜನಪ್ರಿಯ ನಟ-ನಟಿಯರು, ರಾಜಕೀಯ ಗಣ್ಯರು ಆಗಮಿಸಿ ನವವಧುವರರಿಗೆ ಶುಭಾಷಯ ಕೋರಲಿದ್ದಾರೆ.

ಪ್ರೇಮಲೋಕ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಹೊಸ ಭಾಷ್ಯ ಬರೆದು ಒಂದೇ ಹೃದಯ ಎರಡು ದೇಹಗಳಿಂತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖಾರ ಜೋಡಿ ಮದುವೆಯ ರಂಗನ್ನು ಹೆಚ್ಚಿಸಲಿದೆ.

ರವಿಯ ಮಗಳ ಮದುವೆಯಲ್ಲಿ ಸಂಗೀತದ ಸುಧೆ ಹರಿಸುವ ಜವಾಬ್ದಾರಿಯನ್ನು ಹೊತ್ತಿರುವ ಹಂಸಲೇಖಾ ಅವರು ರವಿಚಂದ್ರನ್ ನಟಿಸಿರುವ ಚಿತ್ರಗೀತೆಗಳ ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ