ಬಿಜೆಪಿಗೆ ಸೇರ್ಪಡೆಯಾದ ತೃಣಮೂಲ ಕಾಂಗ್ರೆಸ್ 3 ಶಾಸಕರು, 50 ಕೌನ್ಸಿಲರ್ ಗಳು

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಬೆನ್ನಲ್ಲೇ ತೃಣಮೂಲಕಾಂಗ್ರೆಸ್ನ ಹಲವು ನಾಯಕರು ಕೂಡ ದೀದಿಗೆ ಶಾಕ್ ನೀದಲು ಮುಂದಾಗಿದ್ದಾರೆ.

ತೃಣಮೂಲ ಕಾಂಗ್ರೆಸ್‌ 3 ಶಾಸಕರು, 50ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಕುಲ್‌ ರಾಯ್‌ ಪುತ್ರ ಸುಬ್ರಂಗ್ಶು ರಾಯ್‌ ಸೇರಿ ಮೂವರು ಶಾಸಕರು ಬಿಜೆಪಿ ಸೇರಿದ್ದಾರೆ. ಇದರ ಜತೆ ಕೌನ್ಸಿಲರ್‌ಗಳು ಕಮಲ ಹಿಡಿದಿದ್ದಾರೆ.

ಇಷ್ಟು ಮಾತ್ರವಲ್ಲದೇ, ಎಡಪಕ್ಷದ ಶಾಸಕರೊಬ್ಬರು ಕೂಡ ಕೇಸರಿ ಪಡೆಗೆ ಹಾರಿದ್ದಾರೆ. ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲಿ ಉಸಿರುಗಟ್ಟಿರುವ ವಾತಾವರಣ ಇತ್ತು. ಹೀಗಾಗಿ ಪಕ್ಷ ಬಿಡಬೇಕಾಯಿತು ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಏಳು ಹಂತದಲ್ಲಿ ಚುನಾವಣೆ ನಡೆದಿತ್ತು. ಈಗ ಏಳು ಹಂತದಲ್ಲಿ ಶಾಸಕರು ಬಿಜೆಪಿ ಸೇರಲಿದ್ದಾರೆ ನೋಡುತ್ತಿರಿ ಎಂದು ತೃಣಮೂಲ ಕಾಂಗ್ರೆಸ್‌ ಅಧಿನಾಯಕಿ ಮಮತಾ ಬ್ಯಾನರ್ಜಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಜಯ ವರ್ಗೀಯ ತಿಳಿಸಿದ್ದಾರೆ.

3 TMC MLAs, over 50 councillors join BJP

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ