ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆತ

ಮಧುರೈ: ನಾಥೂರಾಂ ಗೋಡ್ಸೆ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್​ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ.

ತಮಿಳುನಾಡಿನ ತಿರುಪ್ಪರಂಕುಂದರಂ ವಿಧಾನಾಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಕಮಲ್ ಹಾಸನ್, ವಾಹನದಲ್ಲಿ ಪ್ರಚಾರ ನಡೆಸಿ, ಅದೇ ವಾಹನದಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ವಾಹನದ ಮೇಲೆ ಸಾರ್ವಜನಿಕರು ಚಪ್ಪಲಿ ದಾಳಿ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಕಮಲ್​ಹಾಸನ್​ ಅವರು ತಮ್ಮ ಪ್ರಚಾರ ವಾಹನದ ಮೇಲೆ ನಿಂತು ಭಾಷಣ ಮಾಡುತ್ತಿದ್ದರು. ಆಗ ಕೆಲ ಕಿಡಿಗೇಡಿಗಳು ಚಪ್ಪಲಿ ದಾಳಿ ಮಾಡಿದರು. ಆದರೆ, ಚಪ್ಪಲಿ ಕಮಲ್​ಹಾಸನ್​ ಅವರ ಮೇಲೆ ಬೀಳಲಿಲ್ಲ ಎಂದು ತಿಳಿಸಿದ್ದಾರೆ.

Chappals hurled at Kamal Haasan amid row over Nathuram Godse

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ