ಮೇ.17ರಿಂದ 19ರವರೆಗೆ ಬರಮುಕ್ತ ಕರ್ನಾಟಕ ಆಂದೋಲನ

Varta Mitra News

ಬೆಂಗಳೂರು, ಮೇ 16-ಗುಮ್ಮನಹಳ್ಳಿ ಡಾ. ರಾಮ್ಮನೋಹರ್ ಲೋಹಿಯಾ ಸಮತಾ ವಿದ್ಯಾಲಯ ವತಿಯಿಂದ ಬರಮುಕ್ತ ಕರ್ನಾಟಕ ಆಂದೋಲನವನ್ನ ಮೇ 17ರಿಂದ 19 ರವರೆಗೆ ವಿದ್ಯಾಲಯದಲ್ಲೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ.ರವಿವರ್ಮ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಎದುರಿಸುತ್ತಿರುವ ಭೀಕರ ಮತ್ತು ನಿರಂತರ ಬರಸ್ಥಿತಿ ಇರುವ ಹಿನ್ನೆಲೆಯಲ್ಲಿ ಮಾರ್ಗೋತಾಯ ಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ಆಂದೋಲನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಜಲ ಸಂರಕ್ಷಣೆ ಮತ್ತು ಜಲನಿರ್ವಹಣೆ ವಿನೂತನ ವಿಶಿಷ್ಟ ಮಾದರಿಗಳನ್ನು ರೂಪಿಸುವ ಪ್ರಯತ್ನದಲ್ಲಿ ತೊಡಗುವಂತಾಗಬೇಕೆಂಬುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದರು.

ಈ ತರಬೇತಿ ಸಮಾವೇಶವನ್ನ ತರುಣ್ ಭಾರತ್ ಸಂಘದ ಮುಖಂಡರು ಹಾಗೂ ಭಾರತದ ಜಲ ಪುರುಷರೆಂದು ಪ್ರಖ್ಯಾತರಾದ ಡಾ. ರಾಜೇಂದ್ರಸಿಂಗ್ ನಡೆಸಿಕೊಡಲಿದ್ದಾರೆ. ಪ್ರತಿ ಜಿಲ್ಲೆಗಳಿಂದ 10ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ