ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ನಿಷೇಧಕ್ಕೆ ಶಿವಸೇನೆ ಆಗ್ರಹ

ಮುಂಬೈ: ಈಸ್ಟರ್ ಭಯೋತ್ಪಾದಕ ದಾಳಿಯಿಂದಾಗಿ 250 ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಬೆನ್ನಲ್ಲೇ ಮುನ್ನೆಚಾರಿಕಾ ಕ್ರಮವಾಗಿ ಶ್ರೀಲಂಕಾ ಸರ್ಕಾರ ಬುರ್ಕಾ ನಿಷೇಧಿಸಿರುವಂತೆ ಭಾರತದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ನಿಷೇಧಿಸುವಂತೆ ಶಿವಸೇನೆ ಆಗ್ರಹಿಸಿದೆ.

“ಈ ಹಿಂದೆಯೇ ಶಿವಸೇನೆ ಪಕ್ಷವು ಬುರ್ಕಾ ನಿಷೇಧವನ್ನು ಪ್ರಸ್ತಾಪಿಸಿತ್ತು. ಈ ಕ್ರಮ ರಾವಣನ (ಶ್ರೀಲಂಕಾ) ಲಂಕಾದಲ್ಲಿ ಈಗಾಗಲೇ ಜಾರಿಯಾಗಿದೆ. ಆದರೆ ರಾಮನ ಅಯೋಧ್ಯೆಯಲ್ಲಿ ಯಾವಾಗ ಜಾರಿಯಾಗಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಪ್ರಶ್ನೆ” ಎಂದು ಶಿವಸೇನಾ ಹೇಳಿದೆ.

“ಭದ್ರತಾ ಪಡೆಗಳು ಯಾರನ್ನಾದರೂ ಗುರುತಿಸುವಲ್ಲಿ ಯಾವುದೇ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಈ ನಿಷೇಧವನ್ನು ಶಿಫಾರಸು ಮಾಡಲಾಗಿದೆ.

ಜನರು ಬುರ್ಕಾ ಅಥವಾ ಇತರ ಯಾವುದೇ ಮುಖ ಮುಚ್ಚುವ ಉಡುಪನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗುವ ಸಾಧ್ಯತೆಯಿದೆ” ಎಂದು ಶಿವಸೇನೆಯ ‘ಸಾಮನಾ’ ಮತ್ತು ‘ದೋಪಹರ್ ಕಾ ಸಾಮನಾ’ ದ ಸಂಪಾದಕೀಯದಲ್ಲಿ ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ