ಪ್ರಧಾನಿ ಮೋದಿ ಹೇಳಿಕೆಗೆ ಟಿಎಂಸಿ ತಿರುಗೇಟು

ಅಸನ್‌ಸೋಲ್‌: ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಟಿಎಂಸಿ ಶಾಸಕರು ಬಂಡಾಯವೇಳಲಿದ್ದಾರೆ ಎಂಬ ಭೀತಿ ಹುಟ್ಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಟಿಎಂಸಿ, ನೀವು ಬಂದಿರುವುದು ಚುನಾವಣಾ ಪ್ರಚಾರಕ್ಕೋ ಅಥವಾ ಕುದುರೆ ವ್ಯಾಪಾರಕ್ಕೋ ಎಂದು ಪ್ರಶ್ನಿಸಿದೆ.

ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ ಬಂದಿದ್ದು ಚುನಾವಣೆ ಪ್ರಚಾರಕ್ಕೋ ಅಥವಾ ಶಾಸಕರ ಕುದುರೆ ವ್ಯಾಪಾರಕ್ಕೋ? ಎಂದು ಟಿಎಂಸಿ ನಾಯಕ ಡೆರಿಕ್ ಒಬ್ರೈನ್ ಕೇಳಿದ್ದಾರೆ. ಪ್ರಧಾನಿ ಮೋದಿ ಅವರನ್ನು ‘ಎಕ್ಸ್ಪೈರಿ ಬಾಬು’ (ಅವಧಿ ತೀರುತ್ತಿರುವ ನಾಯಕ) ಎಂದು ಬಣ್ಣಿಸಿದ ಡೆರಿಕ್, ಬಿಜೆಪಿ ಜತೆ 40 ಶಾಸಕರಲ್ಲ, ಒಬ್ಬ ಕೌನ್ಸಿಲರ್‌ ಕೂಡ ಹೋಗುವುದಿಲ್ಲ ಎಂದು ಟಾಂಗ್ ನೀಡಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡುವುದಾಗಿಯೂ ಅವರು ಟ್ವೀಟ್ ಮಾಡಿದ್ದಾರೆ.

‘Campaigning or horse trading’: Derek’s dig at PM on his TMC defection barb

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ