ಇಂದು ಬೆಂಗಳೂರು ಕರಗ ಹಬ್ಬದ ಹಿನ್ನಲೆ-ಹಲವು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು, ಏ.19- ಬೆಂಗಳೂರು ನಗರ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಧರ್ಮರಾಯಸ್ವಾಮಿ ಸೇವಸ್ಥಾನದಲ್ಲಿ ಇಂದು ಬೆಂಗಳೂರು ಕರಗ ಹಬ್ಬ ನಡೆಯುವ ಪ್ರಯುಕ್ತ, ಕರಗ ವೀಕ್ಷಿಸಲು ಹಾಗೂ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯ ವ್ಯಕ್ತಿಗಳು, ಭಕ್ತಾಧಿಗಳು ಮತ್ತು ಸಾರ್ವಜನಿಕರು ಆಗಮಿಸುವುದರಿಂದ ಸುಗಮ ವಾಹನ ಸಂಚಾರ ಮತ್ತು ಪಾದಾಚಾರಿಗಳ ಹಿತದೃಷ್ಟಿಯಿಂದ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಎಸ್‍ಜೆಪಿ ರಸ್ತೆಯಲ್ಲಿ, ಸಿಟಿ ಮಾರ್ಕೆಟ್ ಕಡೆಯಿಂದ ಬಂದು ಎಸ್‍ಜೆಪಿ ಜಂಕ್ಷನ್ ಬಳಿ ಪೈಲ್ವಾನ್ ಕೃಷ್ಣಪ್ಪ ರಸ್ತೆಗೆ ಎಡ ತಿರುವು ಪಡೆಯುತ್ತಿದ್ದ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು, ಈ ವಾಹನಗಳು ಟೌನ್‍ಹಾಲ್ ವೃತ್ತ-ಜೆ.ಸಿ.ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ.

ಪೈಲ್ವಾನ್ ಕೃಷ್ಣಪ್ಪ ಲೇನ್, ಓಟಿಸಿ ರಸ್ತೆ ಮತ್ತು ನಗರ್ತಪೇಟೆ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಸಂಚಾರ ನಿಬಂಧನೆಯು ಇಂದು ಸಂಜೆ 4 ಗಂಟೆಯಿಂದ ನಾಳೆ ಮಧ್ಯಾಹ್ನ 2 ಗಂಟೆಯವರೆಗೆ ಜಾರಿಯಲ್ಲಿದ್ದು, ಸಾರ್ವಜನಿಕರ ಸಹಕರಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ