ಕೈ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಸಿಂಗ್ & ಸಿಂಧೆ ಪ್ರಚಾರ ಜೋರು

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಔರಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಎಲ್ಸಿ ವಿಜಯಸಿಂಗ್ ಹಾಗೂ ಮುಖಂಡ ಭೀಮಸೇನರಾವ ಸಿಂಧೆ ನೇತೃತ್ವದಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

ಔರಾದ್ ತಾಲ್ಲೂಕಿನ ಬೋಂತಿ, ಹೋಕ್ರಣಾ, ನಂದಿ ಬಿಜಲಗಾಂವ. ಚೋಂಡಿ ಮುಖೆಡ್ ಸೇರಿದಂತೆ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಔರಾದ್ ತಾಲೂಕಿನ ಎಲ್ಲೆಡೆ ಕಾಂಗ್ರೆಸ್ ಪರ ವಾತಾವರಣ ಇದೆ. ಕಾಂಗ್ರೆಸ್ ಗೆ ಅಧಿಕ ಲೀಡ್ ಸಿಗಲಿದೆ ಎಂದು ವಿಜಯಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಅಭಿವೃದ್ಧಿ ಯಲ್ಲಿ ಕಾಂಗ್ರೆಸ್ ಹಾಗೂ ಖಂಡ್ರೆ ಪರಿವಾರದ ಕೊಡುಗೆ ಅಪಾರ. ಅವಕಾಶ ಕೊಟ್ಟರು ಅಭಿವೃದ್ಧಿ ಯಲ್ಲಿ ಭಗವಂತ ಖೂಬಾ ವಿಫಲ ರಾಗಿದ್ದಾರೆ. ಈ ಬಾರಿ ಬಿಜೆಪಿ ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಭೀಮಸೇನರಾವ ಶಿಂಧೆ, ಈಶ್ವರ ಖಂಡ್ರೆ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಬಿಜೆಪಿ ಭಾರಿ ಅಂತರದಿಂದ ಸೋಲು ಗ್ಯಾರಂಟಿ ಎಂದು ಹೇಳಿದರು.
ಪ್ರಮುಖ ರಾದ ರಾಮ ನರೋಟೆ, ರತಿಕಾಂತ ಮಜ್ಜಿಗೆ, ರಾಹುಲ್ ಭೋಮೆ ಹಾಗೂ ಅನೆಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ