ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸುವ ಹಿನ್ನಲೆ ಕಡ್ಡಾಯವಾಗಿ ಮತದಾನ ಮಾಡಬೇಕು-ಸಾಮಾಜಿಕ ಅಭಿವೃದ್ಧಿ ರಂಗ

ಬೆಂಗಳೂರು, ಏ.17-ನಮ್ಮ ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡುವುದು ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ. ಹಾಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾಮಾಜಿಕ ಅಭಿವೃದ್ಧಿ ರಂಗ ಮನವಿ ಮಾಡಿದೆ.

ಸುದ್ದಿಗೋಷ್ಟಿಯಲ್ಲಿ ರಂಗದ ಅಧ್ಯಕ್ಷ ಟಿ.ಎಲ್ .ರಂಗನಾಥ ಮಾತನಾಡಿ, ವಿದ್ಯಾವಂತರು, ಉದ್ಯಮಿಗಳು, ಶ್ರೀಮಂತ ವರ್ಗದವರು ಸರ್ಕಾರದ ಸೌಕರ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಇಂಥವರೇ ಮತದಾನಕ್ಕೆ ಮುಂದಾಗದಿರುವುದು ನಮ್ಮ ದೇಶದ ದುರಂತವೆಂದರೆ ತಪ್ಪಾಗಲಾರದು ಎಂದರು.

ರಾಷ್ಟ್ರದ ರಾಜ್ಯಗಳ ಸಾರ್ವಜನಿಕರ ಕಚೇರಿಗಳಲ್ಲಿ ಭ್ರಷ್ಟಾಚಾರ ಹೇಳತೀರದಂತಾಗಿದೆ. ನಮ್ಮ ಕಡೆ ತಿರುಗಿ ನೋಡುವುದಕ್ಕೂ ಲಂಚ ನೀಡಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕೆಲ್ಲ ನಾವೆಲ್ಲ ಆಯ್ಕೆ ಮಾಡಿ ಕಳುಹಿಸುವ ಪ್ರಜಾಪ್ರತಿಧಿಗಳೇ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ಆದ್ದರಿಂದ ಎಲ್ಲರೂ ಮತದಾನ ಬಗ್ಗೆ ನಿರಾಸಕ್ತಿ ತೋರದೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ