ಖೂಬಾ ಪರ ಪ್ರದಿಪ್ ವಾತಡೆ ಬಿರುಸಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಬಸವಕಲ್ಯಾಣದಲ್ಲಿ ಬಿಜೆಪಿ ಯುವ ಮುಖಂಡ ಪ್ರದೀಪ ವಾತಡೆ ಮನೆ ಮನೆಗೆ ಮಿಂಚಿನ ಪ್ರಚರಾ ಮಾಡಿದರು.

ಇದೆ ಸಮಯದಲ್ಲಿ ಪ್ರದಿಪ್ ವತಾಡೆ ಮಾತನಾಡಿ ಬೀದರ್ ಲೋಕಸಭಾ ಕ್ಷೇತ್ರದಲ್ಲಿ12 ರಾಷ್ಟ್ರೀಯ ಹೆದ್ದಾರಿ, 13 ಹೊಸ ರೈಲು ಗಳು ತಂದಿರುವ ಖ್ಯಾತಿ ಖೂಬಾ ಅವರಿಗೆ ಸಲ್ಲುತ್ತದೆ. ಇಷ್ಟೊಂದು ಹೆದ್ದಾರಿ, ರೈಲು ಬೇರೆ ಯಾರೊಬ್ಬ ಸಂಸದರು ತಂದಿಲ್ಲ. ನಿರೀಕ್ಷೆಗೂ ಮೀರಿ ಖೂಬಾ ಕೆಲಸ ಮಾಡಿದ್ದಾರೆ. ಆದರೆ ವಿರೋಧ ಪಕ್ಷಗಳು ಖೂಬಾ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಫಸಲ್ ಬಿಮಾ ಯೋಜನೆಯಡಿ150 ಕೋಟಿಗೂ ಅಧಿಕ ಹಣ ಬೀದರ್ ಗೆ ಬಂದಿದೆ. ಈ ಖ್ಯಾತಿ ಖೂಬಾ ಅವರಿಗೆ ಸಲ್ಲುತ್ತದೆ. ದೇಶದಲ್ಲಿ ಇಷ್ಟೊಂದು ಅಧಿಕ ಹಣ ಯಾರು ತಂದಿಲ್ಲ. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಬೀದರ್ ಸಮಗ್ರ ಅಭಿವೃದ್ಧಿ ಗೆ ಖೂಬಾ ಅವರಿಗೆ ಇನ್ನೊಂದು ಬಾರಿ ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ