ಬಿಜೆಪಿ ಪರ ಪ್ರದೀಪ ವಾತಡೆ ಮಿಂಚಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಬಸವಕಲ್ಯಾಣದಲ್ಲಿ ಬಿಜೆಪಿ ಯುವ ಮುಖಂಡ ಪ್ರದೀಪ ವಾತಡೆ ಮತಯಾಚನೆ ಮಾಡಿದರು.

ದೇಶಕ್ಕೆ ಮೋದಿ ಅನಿವಾರ್ಯ. ಹೀಗಾಗಿ ಭಗವಂತ ಖೂಬಾ ಅವರಿಗೆ ಬೆಂಬಲಿಸುವ ಮೂಲಕ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಖೂಬಾ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಇನ್ನೊಂದು ಬಾರಿ ಖೂಬಾ ಅವರಿಗೆ ಆಶೀರ್ವದಿಸಿ ದಿಲ್ಲಿಗೆ ಕಳುಹಿಸಬೇಕು ಎಂದು ಕೋರಿದರು.

ದೇಶಾದ್ಯಂತ ಮೋದಿ ಅಲೆ ಇದೆ. ಕಾಂಗ್ರೆಸ್ ತನ್ನ ಅಸ್ತಿತ್ವಕ್ಕೆ ಪರದಾಡಬೇಕಾಗಿದೆ. ಈ ಬಾರಿಯೂ ಕೇಂದ್ರದಲ್ಲಿ ಮೋದಿ‌ ನೇತೃತ್ವದಲ್ಲಿ ‌ಆಡಳಿತಕ್ಕೆ ಬರುವುದು ಪಕ್ಕಾ ಎಂದು ಹೇಳಿದರು.

ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಈ ಬಾರಿ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶಾದ್ಯಂತ ಎದ್ದಿರುವ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ. 2014 ಕ್ಕಿಂತ ಹತ್ತು ಪಟ್ಟು ಈ ಚುನಾವಣೆ ಯಲ್ಲಿ ಮೋದಿ ಅಲೆ ಇದೆ. ಈ‌ ಬಾರಿ ಕಾಂಗ್ರೆಸ್ ನವರು ತಮ್ಮ ಠೇವಣಿ ಉಳಿಸಲು ಹೋರಾಟ‌ ನಡೆಸಬೇಕಾಗಿದೆ ಎಂದು ಮುಖಂಡರು ಹೇಳಿದರು.

ಐದು ವರ್ಷಗಳ ಖೂಬಾ ಸಾಧನೆ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕೆಲಸ ನೋಡಿ ಮತ ನೀಡಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ