ಖೂಬಾ ಪರ ಕೇಸರಿ ಪಡೆ ಭರ್ಜರಿ ಪ್ರಚಾರ

ಬೀದರ್: ಬೇಸಿಗೆಯ ಪ್ರಖರ‌ ಬಿಸಿಲಿಗೆ ಲೆಕ್ಕಿಸದೆ ಚುನಾವಣೆ ಪ್ರಚಾರ ಜೋರಾಗಿದೆ. ಕಮಲ ಪಕ್ಷದ ಅಭ್ಯರ್ಥಿ ಪರವಾಗಿ ಕೇಸರಿ ಪಡೆ ಬಿರುಸಿನ ಪ್ರಚಾರ‌ ನಡೆಸುತ್ತಿದೆ.

ನಗರದ ವಿವಿಧ ಬಡಾವಣೆಯಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಮತಯಾಚನೆ ಮಾಡಿದ ಮುಖಂಡರ ಪಡೆ, ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಈ ಬಾರಿ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶಾದ್ಯಂತ ಎದ್ದಿರುವ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ. 2014 ಕ್ಕಿಂತ ಹತ್ತು ಪಟ್ಟು ಈ ಚುನಾವಣೆ ಯಲ್ಲಿ ಮೋದಿ ಅಲೆ ಇದೆ. ಈ‌ ಬಾರಿ ಕಾಂಗ್ರೆಸ್ ನವರು ತಮ್ಮ ಠೇವಣಿ ಉಳಿಸಲು ಹೋರಾಟ‌ ನಡೆಸಬೇಕಾಗಿದೆ ಎಂದು ಮುಖಂಡರು ಹೇಳಿದರು.

ಐದು ವರ್ಷಗಳ ಖೂಬಾ ಸಾಧನೆ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕೆಲಸ ನೋಡಿ ಮತ ನೀಡಿ ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರಬೇಕಾದರೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಭಗವಂತ ಖೂಬಾ ಪತ್ನಿ ಶೀಲಾವತಿ ಖೂಬಾ, ಬೀದರ್ ವಿಧಾನಸಭಾ ಕ್ಷೇತ್ರದ ಸಂಚಾಲಕ ಬಾಬು ವಾಲಿ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ರಾಜಕುಮಾರ ಚಿದ್ರಿ, ಹಣಮಂತ ಬುಳ್ಳಾ, ಅರುಣ ಬಸವನಗರ, ಮಹೇಶ್ವರ ಸ್ವಾಮಿ, ಮಹೇಶ ಪಾಲಂ, ಕೈಲಾಸ ಕಾಜಿ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ