ಡ್ಯಾನ್ಸ್‌ ಮಾಡಿ ಜೋಶ್ ನೀಡಿದ ಖಂಡ್ರೆ

ಬೀದರ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ128 ಜಯಂತಿ ನಗರದಲ್ಲಿ ಭಾನುವಾರ ಸಡಗರ, ಸಂಭ್ರಮದಿಂದ ನಡೆಯಿತು.

ಜಯಂತಿ ನಿಮಿತ್ತ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೆಜ್ಜೆ ಹಾಕಿ ಯುವಕರಿಗೆ ಜೋಶ್ ನೀಡಿದರು.

ಡಿಜಿ ಸೌಂಡ್ ಗೆ ಮುಖಂಡರೊಂದಿಗೆ ಡ್ಯಾನ್ಸ್ ಮಾಡಿದ ಖೂಬಾ, ಕೆಲ ಕಾಲ ಹೆಜ್ಜೆ ಹಾಕಿ ಜೋಶ್ ನೀಡಿದರು.

ಕೆಲವರು ಈಶ್ವರ ಖಂಡ್ರೆ ಅವರನ್ನು ಎತ್ತುಕೊಂಡು ಕುಣಿದಾಡಿದರು.

ಮುಖಂಡರಾದ ಅನೀಲಕುಮಾರ ಬೆಲ್ದಾರ್, ಮಾರುತಿ ಬೌದ್ಧೆ, ನಾಗೇಂದ್ರ ದಂಡೆ, ಅರುಣ್ ಪಟೇಲ್, ವಿಜಯಕುಮಾರ ಸೋನಾರೆ, ಮಹೇಶ ಗೋರನಾಳಕರ್ ಸೇರಿದಂತೆ ಹಲವಾರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ