ಮೋದಿ ಅಲೆ ಕೇವಲ ಭ್ರಮೆ

ಬೀದರ್: ದೇಶದಲ್ಲಿ ಮೋದಿ ಅಲೆ ಇದೆ ಎನ್ನುವುದು ಕೇವಲ ಭ್ರಮೆ. ಈ ಬಾರಿ ಮತದಾರರು ಬಿಜೆಪಿಗೆ ಮನೆಗೆ ಕಳುಹಿಸುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಹೇಳಿದರು.

ಬಸವಕಲ್ಯಾಣ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಈಶ್ವರ ಖಂಡ್ರೆ, 2014ರ ಚುನಾವಣೆಯಲ್ಲಿ ಸಹ ಮೋದಿ ಅಲೆ ಎಂದು ಹೇಳಿ ಗೆಲುವು ಸಾಧಿಸಿದ ಖೂ‌ಬಾ ಐದು ವರ್ಷದಲ್ಲಿ ಮಾಡಿದ್ದು ಶುನ್ಯ ಸಾಧನೆ. ಬಿಜೆಪಿಯ ಅಹಂ ಪಾಠ ಕಲಿಸುವ ಕಾಲ ಬಂದಿದೆ ಎಂದರು.

ಬಿಜೆಪಿಯವರು ಸುಳ್ಳು ಆಶ್ವಾಸನೆ ನೀಡಿವುದೇ ಬಂಡವಾಳ ಮಾಡಿಕೊಂಡಿದ್ದಾರೆ. ಗೋರ್ಟಾ ಗ್ರಾಮದಲ್ಲಿ ಸ್ಮಾರಕ ಮಾಡುವುದಾಗಿ ಹೇಳಿ ಅಲ್ಲಿನ ಜನರಿಗೆ ಮೋಸ ಮಾಡಿದರು.

ಗೋರ್ಟಾ ವನ್ನು ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿಕೊಂಡು ನಿರ್ಲಕ್ಷ್ಯ ಮಾಡಲಾಯಿತು. ಹೀಗೆ ಹತ್ತು ಹಲವು ಸುಳ್ಳು ಭರವಸೆಗಳಿಗೆ ಜನ ಬೇಸತ್ತು ಹೋಗಿದ್ದಾರೆ. ಅಭಿವೃದ್ಧಿ ಮಾಡದಿದ್ದರೆ ಉಳಿಗಾಲವಿಲ್ಲ ಎನ್ನುವುದು ಖೂಬಾ ಗೆ ಈ ಬಾರಿ ಮತದಾರರು ತೋರಿಸಲಿದ್ದಾರೆ ಎಂದು ಹೇಳಿದರು.

ಕ್ಷೇತ್ರದ ಎಂಟು ವಿಧಾನಸಭೆ ಗಳಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಇದೆ. ಹೀಗಾಗಿ ಈ ಬಾರಿ ಎರಡು ಲಕ್ಷ ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ