ಚಿಣ್ಯ ಹೋಬಳಿ ಕೇಂದ್ರಕ್ಕೆ ನಟ ದರ್ಶನ್ ಬೇಟಿ-ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ದೊರೆತ ಅದ್ಧೂರಿ ಸ್ವಾಗತ

ನಾಗಮಂಗಲ, ಏ.5- ನಾಗಮಂಗಲದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಬಾವುಟಗಳೊಂದಿಗೆ ಕಾರ್ಯಕರ್ತರು ಬಹಿರಂಗ ಪ್ರಚಾರ ನಡೆಸಿದರು.

ತಾಲ್ಲೂಕಿನ ಗಡಿ ಚಿಣ್ಯ ಹೋಬಳಿ ಕೇಂದ್ರಕ್ಕೆ ಮೈಸೂರು ರಸ್ತೆಯಲ್ಲಿ ಆಗಮಿಸಿದ ನಟ ದರ್ಶನ್‍ರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಬಾವುಟ ಹಿಡಿದು ಹಾರ ಹಾಕಿ ಸ್ವಾಗತ ಕೋರಿದರು.

ಈ ವೇಳೆ ಮಾತನಾಡಿದ ದರ್ಶನ್, ಓರ್ವ ವ್ಯಕ್ತಿಯ ಅಭಿಮಾನ ಮತ್ತು ಸ್ವಾಭಿಮಾನವನ್ನು ಯಾರೊಬ್ಬರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಿಮ್ಮಗಳನ್ನು ನಂಬಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರ ಕಹಳೆ ಗುರುತಿಗೆ ಮತ ನೀಡಿ ಜಯಶೀಲರನ್ನಾಗಿಸಬೇಕು ಎಂದು ಮನವಿ ಮಾಡಿದರು.

ರಸ್ತೆಯುದ್ದಕ್ಕೂ ರೋಡ್ ಶೋ ಮಾಡಿದ ಅವರು ಹೊಣಕೆರೆ, ಬ್ರಹ್ಮದೇವರಹಳ್ಳಿ, ಶ್ರೀರಾಮಹಳ್ಳಿ ಗೇಟ್, ಕೆ.ಮಲ್ಲೇನಹಳ್ಳಿ, ಕಾಂತಾಪುರ, ಬೋಗಾದಿ, ಬಿಂಡಿಗನವಿಲೆ ಕದಬಹಳ್ಳಿ, ಬೆಳ್ಳೂರು ಹೋಬಳಿ ಕೇಂದ್ರಗಳಲ್ಲಿ ಅಬ್ಬರದ ಪ್ರಚಾರ ನಡಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ