ಇಂದಿನಿಂದ ಮಂಡ್ಯದಲ್ಲಿ ಸುಮಲತಾ ಪರ ನಟ ಯಶ್ ಅಧಿಕೃತ ಪ್ರಚಾರ

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರವಾಗಿ ಇಂದಿನಿಂದ ನಟ ಯಶ್​ ಅಧಿಕೃತವಾಗಿ ಪ್ರಚಾರ ನಡೆಸಲಿದ್ದಾರೆ.

ಮಂಡ್ಯದ 24 ಹಳ್ಳಿಗಳಲ್ಲಿ ಯಶ್ ರೋಡ್ ಶೋ ನಡೆಸಲಿದ್ದು, ಬೆಳಗ್ಗೆ 9 ಗಂಟೆಗೆ ಉರಮಾರಕಸಲಗೆರೆಯಿಂದ ಪ್ರಚಾರ ಆರಂಭಿಸಲಿದ್ದಾರೆ. ತೂಬಿನಕೆರೆ, ಎಲೆಚಾಕನಹಳ್ಳಿ, ಯಲಿಯೂರು, ಸಿದ್ದಯ್ಯನಕೊಪ್ಪಲು, ಇಂಡವಾಳು, ಕಿರಗಂದೂರು, ಬೇವಿನಹಳ್ಳಿ, ಕೊತ್ತತ್ತಿ, ಕಾಳೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಯಶ್​ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 16ರವರೆಗೆ ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ಮದ್ದೂರು, ನಾಗಮಂಗಲ, ಕೆ.ಆರ್​. ಪೇಟೆ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.

ರಣಕಹಳೆ ಚಿಹ್ನೆಯ ಮೂಲಕ ಚುನಾವಣೆಗೆ ನಿಂತಿರುವ ಸುಮಲತಾ ಪರವಾಗಿ ನಟ ದರ್ಶನ್​ ಕೂಡ ಏ. 16ರವರೆಗೆ ಪ್ರಚಾರ ನಡೆಸಲಿದ್ದಾರೆ. ಶ್ರೀರಂಗಪಟ್ಟಣ, ಮಂಡ್ಯ, ಕೆ.ಆರ್​. ಪೇಟೆ, ನಾಗಮಂಗಲ, ಉಗಾದಿ, ಕೆ.ಆರ್​. ನಗರ, ಮಳವಳ್ಳಿ, ಮದ್ದೂರು, ಪಾಂಡವಪುರದಲ್ಲಿ ಪ್ರಚಾರ ನಡೆಸಲಿದ್ದಾರೆ. ಏ. 16ರಂದು ಸುಮಲತಾ ಜೊತೆಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ