ಶಾಸಕ ಶ್ರೀನಿವಾಸ್‍ಗೌಡ ಮನೆಯಲ್ಲಿ ನಡೆದ ಸಭೆ-ಬೆಂಬಲ ನೀಡುವ ಬಗ್ಗೆ ವ್ಯಕ್ತವಾದ ಪರ-ವಿರೋಧ

ಬೆಂಗಳೂರು, ಏ.1- ಮೈತ್ರಿ ಧರ್ಮ ಕಾಪಾಡುವ ಸಂಬಂಧ ಜೆಡಿಎಸ್ ಸ್ಪಷ್ಟ ನಿಲುವು ತಳೆಯದ ಹಿನ್ನೆಲೆಯಲ್ಲಿ ಇಂದು ಸಹ ಶಾಸಕ ಶ್ರೀನಿವಾಸ್‍ಗೌಡ ಮನೆಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವ ಬಗ್ಗೆ ಪರ-ವಿರೋಧ ವ್ಯಕ್ತವಾಯಿತು.

ಇಂದು ಬೆಳಿಗ್ಗೆ ಶಾಸಕ ಶ್ರೀನಿವಾಸ್‍ಗೌಡರ ಮನೆಯಲ್ಲಿ ನಡೆದ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪರನ್ನು ಬೆಂಬಲಿಸುವಂತೆ ನೀಡಿದ ಹೇಳಿಕೆಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರಿಂದ ಪರ-ವಿರೋಧ ವ್ಯಕ್ತವಾಗಿ ಒಂದು ಹಂತದಲ್ಲಿ ಗಲಭೆ ಏರ್ಪಟ್ಟಿತು.

ಜೆಡಿಎಸ್ ಕಾರ್ಯಕರ್ತರ ನಡುವೆ ಉಂಟಾದ ಗದ್ದಲದಿಂದ ಸಭೆಯನ್ನು 2ದಿನಗಳ ಕಾಲ ಮುಂದೂಡಲಾಯಿತು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಕೋಲಾರ ಲೋಕಸಭಾ ಅಭ್ಯರ್ಥಿಯನ್ನು ಜೆಡಿಎಸ್ ಕಾರ್ಯಕರ್ತರು ಬೆಂಬಲಿಸುವಂತೆ ಹೇಳಿದಾಗ ಸಭೆಯಲ್ಲಿ ಗಲಭೆ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ