ಕಾರ್ಯಕರ್ತರೇ ನಮ್ಮ ಸೈನಿಕರು-ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ-ನಿಖಿಲ್ ಕುಮಾರಸ್ವಾಮಿ

ಮಳವಳ್ಳಿ,ಮಾ.20- ಜಿಲ್ಲೆಯಲ್ಲಿ ಕಾರ್ಯಕರ್ತರೇ ನಮ್ಮ ಸೈನಿಕರು. ಹಾಗಾಗಿ ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಹೇಳಿದ್ದಾರೆ. ತಾಲ್ಲೂಕಿನ ಹಲಗೂರು,ಹಾಡ್ಲಿ, ಬೆಳಕವಾಡಿಗೆ ಭೇಟಿ ನೀಡಿ ಮಾತಯಾಚನೆ ವೇಳೆ ಮಾತನಾಡಿದ ಅವರು, ಸುಮಲತಾ ಪರ ಯಾವುದೇ ಸ್ಟಾರ್ ನಟರು ಪ್ರಚಾರ ಮಾಡಿದರೂ ನನಗೆ ಭಯ ಇಲ್ಲ. ನನ್ನ ಪರವಾಗಿ ಮಂಡ್ಯ ಜನತೆ ಇದ್ದಾರೆ ಎಂದು ಹೇಳುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ಯಶ್‍ಗೆ ಟಾಂಗ್ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ದರ್ಶನ್, ಯಶ್‍ಗೆ ಗೋ ಬ್ಯಾಕ್ ಎಂದು ಪೋಸ್ಟ್ ಮಾಡಿರುವವುದಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಜಾಲತಾಣದಲ್ಲಿರೋ ನಾಲ್ಕು ಜನ ಗೋ ಬ್ಯಾಕ್ ಎಂದರೆ ಚಿತ್ರಣ ಬದಲಾಗಲ್ಲ ಹಾಗಾಗಿ ಯಾರೂ ಯಾರಿಗೂ ಗೋ ಬ್ಯಾಕ್ ಅನ್ನೋದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.

ಪಕ್ಷ ನನಗೆ ಟಿಕೆಟ್ ನೀಡಿ ಜನರ ಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಜನರು ನನ್ನ ಕೈ ಹಿಡಿದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ. ದೆಹಲಿಯಲ್ಲಿ ನಿಮ್ಮ ಪರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದರು.

ದಳವಾಯಿಕೋಡಿಹಳ್ಳಿ ಯಿಂದ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಸಚಿವ ತಮ್ಮಣ್ಣ,ತಾ,ಅಧ್ಯಕ್ಷ ರವಿ(ಕಂಸಾಗರ),ಜಯರಾಜು, ಒಕ್ಕರಹಳ್ಳಿ ಮುಂತಾದವರು ಪಾಲ್ಗೊಂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ