ಪ್ರಯಾಗ್ ರಾಜ್ ನಿಂದ ಗಂಗಾ ಯಾತ್ರೆ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ ಪ್ರಿಯಾಂಕಾ ಗಾಂಧಿ

ಪ್ರಯಾಗ್​ರಾಜ್​: ಲೋಕಸಭೆ ಚುನಾವಣೆಗೆ ದಿನಗಣನೆ ಆರ‍ಂಭವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಪ್ರಚಾರ ಭರಾಟೆ ಜೋರಾಗಿದ್ದು, ಚುನಾವಣೆಗೆ ಭರ್ಜರಿ ಸಿದ್ಧತೆ ನಡಸಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಯಾಗ್​ರಾಜ್​ನಿಂದ ಗಂಗಾ ಯಾತ್ರೆಯನ್ನು ಆರಂಭಿಸಿದ್ದಾರೆ.

ಬೆಳಗ್ಗೆ ಪ್ರಿಯಾಂಕಾ ಪ್ರಯಾಗ್​ರಾಜ್​ನ ಹನುಮಾನ್​ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಆ ನಂತರ ಸಂಗಮದಲ್ಲಿ ಗಂಗಾ ನದಿಗೆ ಪೂಜೆ ಸಲ್ಲಿಸಿದ ನಂತರ ಬೋಟ್​ ಮೂಲಕ ಪ್ರಯಾಗ್​ರಾಜ್​ನಿಂದ ಗಂಗಾ ನದಿ ಮಾರ್ಗವಾಗಿ ಯಾತ್ರೆಯನ್ನು ಆರಂಭಿಸಿದ್ದು, ಮಾರ್ಚ್​ 20ರಂದು ವಾರಾಣಸಿಯ ಅಸ್ಸಿ ಘಾಟ್​ನಲ್ಲಿ ಯಾತ್ರೆ ಮುಕ್ತಾಯವಾಗಲಿದೆ.

ಪ್ರಿಯಾಂಕಾ ಗಾಂಧಿ, ಪ್ರಯಾಗ್​ರಾಜ್​, ಬದೋಹಿ, ಮಿರ್ಜಾಪುರ, ವಾರಾಣಸಿಯಲ್ಲಿ ಕಾರ್ಯಕರ್ತರ, ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇದೇ ವೇಳೆಯಲ್ಲಿ ಹಲವು ಸಂಘಟನೆಗಳ ಮುಖ್ಯಸ್ಥರನ್ನೂ ಭೇಟಿಯಾಗಲಿದ್ದಾರೆ.

Priyanka Gandhi Arrives in Prayagraj to Kick-start Election Campaign with Boat Rally to Varanasi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ