ಅಸಂಘಟಿತ ವಲಯದವರಿಗಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಯೋಜನೆಗೆ ಪ್ರಧಾನಿ ಚಾಲನೆ

ಅಹಮದಾಬಾದ್ : ಅಸಂಘಟಿತ ವಲಯದವರಿಗಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಂದಾನ್ ಯೋಜನೆ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನಿಡಿದರು.

ಈ ವೇಳೆ ಮಾತನಾಡಿದ ಅವರು, ಸಮಾಜದ ದುರ್ಬಲ ವರ್ಗವನ್ನು ಮೆಲೆತ್ತುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಗರಿಬೀ ಹಟಾವೋ ಎಂಬ ಘೋಷಣೆ ನೀಡುತ್ತದೆ. ಕೆಲವೊಂದು ಯೋಜನೆಗಳನ್ನು ತಮ್ಮವರಿಗಾಗಿ ಜಾರಿಗೆ ತಂದಿದೆ. ಆದರೆ, ಅವರ ಅಧಿಕಾರವಧಿಯಲ್ಲಿ ಇಂತಹ ಯೋಜನೆಯನ್ನು ಜಾರಿಗೊಳಿಸಿರಲಿಲ್ಲ ಎಂದರು.

55ವರ್ಷ ಆಡಳಿತ ನಡೆಸಿದ ಕಾಂಗ್ರೆಸ್, ಮತಗಳಿಕೆಗಾಗಿ ಬಡತನ ಹೆಸರನ್ನು ಉಪಯೋಗಿಸಿಕೊಂಡಿದೆ ಎಂದು ಟೀಕಿಸಿದರು.

ಬಡತನ ಜನರ ಮನಸ್ಥಿತಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಯೋಚಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ, ಬಡತನಕ್ಕಿಂತ ಬೇರೆ ಏನನ್ನು ಯೋಚಿಸುವುದಿಲ್ಲ ಎಂದು ಯಾರು ಹೇಳಿದರು. ಆದರೆ, ಈ ರೀತಿ ಹೇಳಿಕೆ ನೀಡುವುದು ಅವರ ಮನಸ್ಥಿತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ