ತಿರುಪತಿ, ಮಾ.3- ಶ್ರೀಲಂಕಾ ಪ್ರಧಾನಿ ರಾನೀಲ್ ವಿಕ್ರಮ್ಸಿಂಘೆ ಇಂದು ವಿಶ್ವವಿಖ್ಯಾತ ತಿರುಮಲ-ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ತಮ್ಮ ಪತ್ನಿ ಮೈತ್ರಿ ಅವರೊಂದಿಗೆ ಇಂದು ಬೆಳಿಗ್ಗೆ ತಿರುಪತಿ ಬೆಟ್ಟದ ಮಹಾದ್ವಾರಕ್ಕೆ ಆಗಮಿಸಿದ ದ್ವೀಪ ರಾಷ್ಟ್ರದ ಯೂನೆಟೆಡ್ ನ್ಯಾಷನಲ್ ಪಾರ್ಟಿ ಮುಖ್ಯಸ್ಥ ವಿಕ್ರಮ್ಸಿಂಘೆ ಅವರನ್ನು ಪ್ರಧಾನ ಅರ್ಚಕರು ಹಾಗೂ ತಿರುಮಲ-ತಿರುಪತಿ ದೇವಸ್ಥಾನಂ ಟ್ರಸ್ಟ್ನ ಉನ್ನತ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ದೇವಸ್ಥಾನಕ್ಕೆ ಕರೆದೊಯ್ದರು.
ಬಾಲಾಜಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ರಾನೀಲ್ ವಿಕ್ರಮ್ಸಿಂಘೆ ದಂಪತಿ ಶ್ರೀ ವೆಂಕಟೇಶ್ವರನ ತುಲಾಭಾರ ಮಾಡಿ. ದೇಗುಲಕ್ಕೆ ಸರ್ಮಪಿಸಿದರು.
ಭಾರತಕ್ಕೆ ಭೇಟಿ ನೀಡುವ ಬಹುತೇಕ ಸಂದರ್ಭಗಳಲ್ಲಿ ವಿಕ್ರಮ್ಸಿಂಘೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದು ವಾಡಿಕೆ.