ರಾಡ್‍ನಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಬೆಂಗಳೂರು,ಫೆ.23- ಹಣಕಾಸು ವಿಚಾರದಲ್ಲಿ ಜಗಳ ನಡೆದು ಅಂಗಡಿ ಮಾಲಿಕನಿಗೆ ವೆಲ್ಡರ್ ಒಬ್ಬ ರಾಡ್‍ನಿಂದ ಹಲ್ಲೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೋಲೀಸ್‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಸ್ತಿಯಾಕ್ ರಜಾಕ್ ಹಲ್ಲೆಗೊಳಗಾದ ಅಂಗಡಿ ಮಾಲೀಕ.ಸಲ್ಮಾನ್ ಹಲ್ಲೆ ಮಾಡಿದ ಆರೋಪಿ.

ರಜಾಕ್ ಸಲ್ಮಾನ್‍ನಿಂದ ವೆಲ್ಡಿಂಗ್ ಮಾಡಿಸಿಕೊಂಡು ಹಣ ನೀಡಿರಲಿಲ್ಲ. ಹಣ ಕೇಳಿದಾಗಲೆಲ್ಲ ಸತಾಯಿಸುತ್ತಲೇಇದ್ದ. ನಿನ್ನೆರಾತ್ರಿ 11.45ರಲ್ಲಿ ರಜಾಕ್‍ ಅಂಗಡಿ ಮುಚ್ಚಿ ಹೊರಟಿದ್ದಾಗ ಸಲ್ಮಾನ್ ಬಂದು ವೆಲ್ಡಿಂಗ್ ಹಣ ಕೇಳಿದ್ದಾನೆ.

ಈ ಸಂದರ್ಭದಲ್ಲಿಇಬ್ಬರಿಗೂ ಜಗಳ ನಡೆದು ಸಲ್ಮಾನ್‍ ಕಬ್ಬಿಣದ ರಾಡ್‍ನಿಂದ ರಜಾಕ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ರಜಾಕ್‍ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯವಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.

ಕೆ.ಜಿ.ಹಳ್ಳಿ ಠಾಣೆ ಪೋಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ