ಕಂಪ್ಲಿ ಶಾಸಕ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ

ರಾಮನಗರ: ಈಗಲ್ಟನ್​ ರೆಸಾರ್ಟ್​ನಲ್ಲಿ ಹೊಸಪೇಟೆ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕಂಪ್ಲಿ ಶಾಸಕ ಜೆ.ಎನ್​. ಗಣೇಶ್​ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ರಾಮನಗರ ಜೆಎಂಎಫ್​ಸಿ ಕೋರ್ಟ್​ ಆದೇಶಿಸಿದೆ.

ರಾಮನಗರ ಪೊಲೀಸರು ಗಣೇಶ್​ರನ್ನು ಗುಜರಾತ್​ನ ಸೋಮನಾಥ ಪಟ್ಟಣದಲ್ಲಿ ಬಂಧಿಸಿ ಇಂದು ಬೆಳಗ್ಗೆ ರಾಜ್ಯಕ್ಕೆ ಕರೆತಂದಿದ್ದರು. ಗಣೇಶ್​ರನ್ನು ಬಿಡದಿ ಪೊಲೀಸ್​ ಠಾಣೆಗೆ ಕರೆತಂದ ತನಿಖಾಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ಬಳಿಕ ಶಾಸಕರನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು.

ಶಾಸಕ ಗಣೇಶ್ ಅವರಿಗೆ ಆರೋಗ್ಯ ಸಮಸ್ಯೆಗಳಿದ್ದು, ಅವರನ್ನು‌ ವೈದ್ಯಕೀಯ ಸೌಲಭ್ಯ ಇರುವ ಪರಪ್ಪನ ಅಗ್ರಹಾರ ಅಥವಾ ಸೂಕ್ತ ಸ್ಥಳಕ್ಕೆ ಅವಕಾಶ ನೀಡುವಂತೆ ಗಣೇಶ್ ಪರ ವಕೀಲ ಡೆರಿಕ್ ಅನಿಲ್ ಅವರು ಮನವಿ ಮಡಿದರು.

ಇದಕ್ಕೆ ಸರ್ಕಾರಿ ವಕೀಲರು, ರಾಮನಗರ ನ್ಯಾಯಾಲಯ ದಲ್ಲಿಯೂ ವೈದ್ಯಕೀಯ ಚಿಕಿತ್ಸೆ ನೀಡಬಹುದು ಎಂದು ವಾದಿಸಿದರು. ಅಂತಿಮವಾಗಿ ನ್ಯಾಯಾಧೀಶೆ ಅನಿತಾ ಮಾ. 6ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ