ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರಿಗೆ ಅಗೌರವ ತೋರಿಲ್ಲ: ಶಾಸಕ ರೇಣುಕಾಚಾರ್ಯ

ಬೆಂಗಳೂರು, ಫೆ.14-ರಾಜ್ಯಪಾಲರು ವಿಧಾನಸಭಾಧ್ಯಕ್ಷರಿಗೆ ನಾವು ಅಗೌರವ ತೋರಿಲ್ಲ ಎಂದು ಮಾಜಿಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರಿಗೂ ಅಪಮಾನ ಮಾಡಿಲ್ಲ ಇನ್ನೂ ಮೂರು ದಿನಗಳ ಕಾಲ ಅಧಿವೇಶನ ಮುಂದುವರಿಸಬೇಕು ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ರಾಜ್ಯಪಾಲರ ಮೂಲಕ ಸತ್ಯಕ್ಕೆ ದೂರವಾದ ಸಂದೇಶ ನೀಡಲು ಸರಕಾರ ಹೊರಟಿದ್ದನ್ನು ವಿರೋಧಿಸಿ ನಾವು ಧರಣಿ ಮಾಡಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.

ಬಿಜೆಪಿಯವರು ಧರಣಿಯಲ್ಲಿದ್ದಾಗ ಬಜೆಟ್ ಮೇಲಿನ ಚರ್ಚೆ ನಡೆಯದೆ ಲೇಕಾನುಧಾನುಕ್ಕೆ ತರಾತುರಿಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಅವರು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ