ಟಿಎಂಸಿ ನಾಯಕ ರಿತೇಶ್ ರಾಯ್ ನಿಗೂಡ ಸಾವು

ಕೋಲ್ಕತ್ತಾ, ಫೆ.12- ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆಯಾಗಿ ಎರಡು ದಿನಗಳ ತರುವಾಯ ಟಿಎಂಸಿ ಪಕ್ಷದ ಇನ್ನೋರ್ವ ನಾಯಕ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಕಳೆದ ತಿಂಗಳು ಕಾಂತಿದಲ್ಲಿ ನಡೆದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರ್ಯಾಲಿಯಲ್ಲಿ ಭಾಗವಹಿಸಿದ್ದ ರಿತೇಶ್ ರಾಯ್ ಸೋಮವಾರ ಬೆಳಿಗ್ಗೆ ಹೂಗ್ಲಿ ಜಿಲ್ಲೆ ಯದಾದ ಪುರದಲ್ಲಿ ಮೃತಪಟ್ಟಿದ್ದಾರೆ ಪುರ್ಬ ಮೇಧಿನಿಪುರ ಜಿಲ್ಲೆ ಕಾಂತಿನಲ್ಲಿರುವ ಮೂರು ಗ್ರಾಮ ಪಂಚಾಯತ್ ಸಮಿತಿಗಳ ಟಿಎಂಸಿ ಅಧ್ಯಕ್ಷರಾಗಿದ್ದ ರಿತೇಶ್ ಸಾರಿಗೆ ಸಚಿವ ಮತ್ತು ಪಕ್ಷದ ಬಲಿಷ್ಠ ನಾಯಕ ಸುವೇಂಧು ಅಧಿಕಾರಿ ಆಪ್ತರಾಗಿದ್ದರು. ರಿತೇಶ್ ಫೆಬ್ರವರಿ 7ರಿಂದ ನಾಪತ್ತೆಯಾಗಿದ್ದರು.

ಮೃತ ರಿತೇಶ್ ಕುತ್ತಿಗೆ ಸುತ್ತ ಒಂದು ಆಳವಾದ ಕಪ್ಪು ಗುರುತು ಕಂಡುಬಂದಿದ್ದು ಕುತ್ತಿಗೆಗೆ ಹಗ್ಗದಿಂದ ಬಿಗಿದು ಅವರನ್ನು ಕೊಲ್ಲಲಾಗಿದೆ ಎಂದು ಪೋಲೀಸರು ಶಂಕಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ