ಶಿವಮೊಗ್ಗದಲ್ಲಿ ಫೆ.16ರಂದು ರಾಜ್ಯಮಟ್ಟದ ಕೊರವಂಜಿ ಉತ್ಸವ

ಬೆಂಗಳೂರು, ಫೆ.12- ಕರ್ನಾಟಕ ರಾಜ್ಯ ಕುಳುವ ಮಹಾಸಭಾದ ವತಿಯಿಂದ ರಾಜ್ಯಮಟ್ಟದ ಕೊರವಂಜಿ ಉತ್ಸವವನ್ನು ಇದೇ 16ರಂದು ಶಿವಮೊಗ್ಗ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜದ ಗುರುಗಳಾದ ನಾಗಭೂಷಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ಈಗಾಗಲೇ ಶಿವಮೊಗ್ಗದ ಶ್ರೀರಾಮಣ್ಣ ಶೆಟ್ಟಿ ಪಾರ್ಕ್‍ನಿಂದ ಕೊರವಂಜಿ ಸಾಂಸ್ಕøತಿಕ ಯಾತ್ರೆ ಪ್ರಾರಂಭಿಸಿದ್ದು.ಇದು ರಾಜ್ಯವನ್ನು ಸುತ್ತಿ 16ರಂದು ಭವನಕ್ಕೆ ತಲುಪಲಿದೆ ಎಂದು ತಿಳಿಸಿದರು.

ನಮ್ಮ ಸಮಾಜವು ಅಲೆಮಾರಿ ಜನಾಂಗವಾಗಿದ್ದು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದು. ನಮ್ಮ ಸಮಾಜದವರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಉತ್ಸವವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಮುರಾಘಮಠದ ಶಿವಾಚಾರ್ಯಸ್ವಾಮೀಜಿ ಸೇರಿದಂತೆ ರಾಜಕೀಯದ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಎನ್.ಪ್ರಭು, ಚಿಕ್ಕಪ್ಪಯ್ಯ, ಕೀರ್ತಿ, ಉಲ್ಲಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ