ರಾಜಕೀಯ ಪ್ರವೇಶಿಸಿದರೆ ಅದು ಮಂಡ್ಯ ಕ್ಷೇತ್ರದಿಂದ: ಸುಮಲತಾ ಅಂಬರೀಶ್

ಮಂಡ್ಯ, ಫೆ.10- ರಾಜಕೀಯ ಪ್ರವೇಶಿಸಿದರೆ ಮಂಡ್ಯ ನೆಲದಿಂದಲೇ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸುಮಲತಾ ಅಂಬರೀಷ್ ಇಂದಿಲ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈಗ ನನ್ನ ಪುತ್ರನ ಜೊತೆ ಹಲವರ ಬೇಟಿ ಮಾಡುತ್ತಿದ್ದೇನೆ ಇಂದು ಆದಿಚುಂಚನಗಿರಿ ಬೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೇನೆ ಅವರೊಂದಿಗೆ ನನ್ನ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದೇನೆ.

ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಿಸಿದರೆ ಅದು ಮಂಡ್ಯ ಕ್ಷೇತ್ರದಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ನನ್ನ ಪತಿ ಅಂಬರೀಷ್ ಕೂಡ ಇಲ್ಲಿನ ಜನರ ಜೊತೆ ಅಭಿನಾಭಾವ ಸಂಬಂಧ ಹೊಂದಿದ್ದರು.ಪಕ್ಷಬೇಧ ಮರೆತು ಅವರನ್ನು ಪ್ರೀತಿಸುವ ಅಭಿಮಾನಿಗಳೂ ಕೂಡಾ ಇದ್ದಾರೆ. ಎಲ್ಲರ ಅಭಿಪ್ರಾಯ ಒತ್ತಾಸೆಗೆ ಬೆಲೆಗೆ ಕೊಟ್ಟು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಸಕ್ರಿಯ ರಾಜಕಾರಣಿ ನಾನಲ್ಲ ನನ್ನ ಪತಿ ಕೂಡ ಎಂದಿಗೂ ನಾನಾಗಲಿ ನನ್ನ ಪುತ್ರನಾಗಲಿ ರಾಜಕೀಯಕ್ಕೆ ಕರೆತರಬೇಕೆಂಬ ನಿರ್ಧಾರವನ್ನು ಮಾಡಿರಲ್ಲ ಎಂದು ಅವರು ತಿಳಿಸಿದರು.

ಹಲವರು ನನ್ನ ವಿರುದ್ಧ ಟೀಕೆಗಳನ್ನ ಮಾಡುತ್ತಿದ್ದಾರೆ ಅವರಿಗೆ ಉತ್ತರ ನೀಡುವಂತಹ ಮನಸ್ಸ ಸ್ಥಿತಿ ನನಗಿಲ್ಲ ಅವರೇ ಅರ್ಥ ಮಾಡಿಕೊಳ್ಳಲಿ ಎಂದು ತಿರಗೇಟು ನೀಡಿದ್ದಾರೆ.

ಯಾವ ಪಕ್ಷ ಅಥವಾ ಸ್ಪರ್ಧೆಯ ಬಗ್ಗೆ ಖಚಿತಪಡಿಸದಿದ್ದರೂ ಚುನಾವಣೆ ಸ್ಪರ್ಧಿಸುವಂತಹ ನಡೆ ಅವರಲ್ಲಿ ಕಾಣುತ್ತಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ