ಮಾಜಿ ಸಿ.ಎಂ.ಯಡಿಯೂರಪ್ಪ ದೇಶ ಕಂಡ ಒಬ್ಬ ಭ್ರಷ್ವರಾಜಕಾರಣಿ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಬಂಗಾರಪೇಟೆ, ಫೆ.10- ಆಪರೇಷನ್‍ಕಮಲದ ಹೆಸರಿನಲ್ಲಿ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಪಟ್ಟಣದ ಕುವೆಂಪು ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಬಿಜೆಪಿ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಕಂಡ ಒಬ್ಬ ಭ್ರಷ್ಟರಾಜಕಾರಣಿ ಹಾಗೂ ಜೈಲಿಗೆ ಹೋಗಿ ಬಂದಂತ ಒಬ್ಬ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಹರಿಹಾಯ್ದರು.

ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡದೆ ಇದ್ದರೂ ಸಹ, ಪ್ರಧಾನಿ ಮಂತ್ರಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ಶಾರವರನ್ನು ಬಳಿಸಿಕೊಂಡು ತಮ್ಮ ಪಕ್ಷದ ಶಾಸಕರನ್ನು ಮುಂಬೈನಲ್ಲಿಟ್ಟುಕೊಂಡು ಕೋಟಿ ಕೋಟಿ ಹಣ ಆಮಿಷ ನೀಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಿಎಂ ಬಿಡುಗೊಡೆ ಮಾಡಿರುವ ಆಡಿಯೋ ಮೂಲಕ ಆಪರೇಷನ್ ಕಮಲಕ್ಕಾಗಿ ಹಣ ನೀಡುವುದಾಗಿ ಹೇಳಿರುವುದು ಬಿಎಸ್‍ವೈ ನೇರವಾಗಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪುರಸಭೆ ಅಧ್ಯಕ್ಷ ಅಣ್ಣಾದೊರೈ, ಉಪಾಧ್ಯಕ್ಷ ಷಫೀ, ಸದಸ್ಯರಾದ ರಮೇಶ್, ರಾಜನ್, ರಫೀಕ್, ಬ್ಲಾಕ್ ಕಾಂಗ್ರೆಸ್‍ಅಧ್ಯಕ್ಷ ಎಸ್.ಎನ್.ಪಾರ್ಥಸಾರತಿ ಸೇರಿದಂತೆ ಮತ್ತಿತ್ತರರು ಪ್ರತಿಭಟನೆಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ