ರೈಲಿಗೆ ಸಿಕ್ಕಿ ಅಪರಿಚಿತ ವ್ಯಕ್ತಿಯ ಸಾವು

ಬೆಂಗಳೂರು, ಫೆ.10- ಯಶವಂತಪುರ-ಚಿಕ್ಕಬಾಣವರ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ವ್ಯಕ್ತಿ ಒಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಸುಮಾರು 35ವರ್ಷದ ವ್ಯಕ್ತಿ ಬಿಸ್ಕೆಟ್ ಬಣ್ಣದ ಶರ್ಟ್ ಹಾಗೂ ಮಿಲಿಟರಿ ಫ್ಯಾಂಟ್ ತೊಟ್ಟಿದ್ದು ಆತನ ವಾರಸುದಾರರು ಪತ್ತೆಯಾಗಿಲ್ಲ, ಆತನ ಜೇಬಿನಲ್ಲಿ ಸಿಕ್ಕಿದ ದ್ವಿಚಕ್ರ ವಾಹನದ ನೊಂದಣಿ ದಾಖಲಾತಿಯಲ್ಲಿ ಗಂಗಮ್ಮನ ಗುಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಬ್ಬೇಗೆರೆ ಗಿರೀಶ್ ಕೆ.ಆರ್.ಎಂದು ನಮೂದಿಸಲಾಗಿದೆ.

ತನಿಖೆ ಸಂದರ್ಭದಲ್ಲಿ ಈ ವಿಳಾಸ ಇಲ್ಲ ಎಂದು ತಿಳಿದು ಬಂದಿದೆ. ಯಶವಂತಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ