ನಾಳೆಯಿಂದ ನನ್ನ ಕ್ರಿಕೆಟ್ ಯುದ್ಧ ಆರಂಭ: ಚೇತರಿಸಿಕೊಂಡ ಲಂಕಾ ಓಪನರ್

ಕೆನ್‍ಬೆರಾ:ನನ್ನ ಕ್ರಿಕೆಟ್ ಯುದ್ಧ ನಾಳೆಯಿಂದ ಶುರುವಾಗುತ್ತೆ. ಎಂದು ಲಂಕಾ ಬ್ಯಾಟ್ಸಮನ್ ದಿಮೂತ್ ಕರುಣರತ್ನೆ ತಿಳಿಸಿದ್ದಾರೆ.

ಕ್ಯಾನ್‍ಬೆರಾದಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಪಂದ್ಯದಲ್ಲಿ ವೇಗಿ ಪ್ಯಾಟ್ ಕಮಿನ್ಸ್ ಎಸೆದ ಬೌನ್ಸ್‍ರ್ ದಿಮುತ್ ಕರುಣರತ್ನೆ ಅವರನ್ನ ನೆಲಕ್ಕೆ ಉರುಳುವಂತೆ ಮಾಡಿತ್ತು. ಕುತ್ತಿಗೆಗೆ ಬಡಿದ ಚೆಂಡು ದಿಮುತ್ ಕರುಣ ರತ್ನೆ ಭಾರೀ ನೋವಿನಲ್ಲಿ ನರಳಾಡುವಂತೆ ಮಾಡಿತ್ತು.

ದಿಮುತ್ ಕರುಣ ರತ್ನೆ ಅವರ ಆರೋಗ್ಯದ ಬಗ್ಗೆ ಉಭಯ ತಂಡಗಳು ತಲೆ ಕೆಡಿಸಿಕೊಂಡಿತ್ತು. ಸ್ವತಃ ಆಸಿಸ್ ನಾಯಕ ಟಿಮ್ ಪೇನ್ ಮತ್ತು ಆಟಗಾರರು ಆಸ್ಪತ್ರಗೆ ಧಾವಿಸಿ ಆರೋಗ್ಯ ವಿಚಾರಿಸಿದ್ದರು. ಇಡೀ ಕ್ರಿಕೆಟ್ ಲೋಕವೇ ದಿಮುತ್ ಕರುಣ ರತ್ನೆ ಬಗ್ಗೆ ತಲೆ ಕೆಡಿಸಿಕೊಂಡಿತ್ತು. ದಿಮುತ್ ಕರುಣ ರತ್ನೆ ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿತ್ತು.

ಇದೀಗ ಸ್ವತಃ ದಿಮುತ್‍ಕರುಣರತ್ನೆ ನನ್ನ ಕ್ರಿಕೆಟ್ ಯುದ್ಧ ನಾಳೆಯಿಂದ ಶುರುವಾಗುತ್ತೆ ಅಂತ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ ಇದರೊಂದಿಗೆ ಎಲ್ಲ ಆತಂಕಗಳು ದೂರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ