ಗಾಸಿಪ್ ಗಳಿಗೆ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದೆ: ನಟಿ ಜಯಪ್ರದಾ

ನವದೆಹಲಿ: ಹಿರಿಯ ಸಮಾಜವಾದಿ ಪಕ್ಷದ ನಾಯಕ ಅಮರ್​ ಸಿಂಗ್​ ಹಾಗೂ ತಮ್ಮ ಕುರಿತು ಹಬ್ಬಿದ್ದ ಸುದ್ದಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ನಟಿ ಜಯಪ್ರದಾ ಹೇಳಿದ್ದಾರೆ.

ಅಮರ್ ಸಿಂಗ್ ತನಗೆ ಗಾಡ್​ ಫಾದರ್​ ಇದ್ದಂತೆ. ಅವರಿಗೆ ರಾಖಿ ಕಟ್ಟಿದರೂ ಜನರು ಮಾತ್ರ ತಮ್ಮ ಮತ್ತು ಅವರ ನಡುವೆ ಇಲ್ಲಸಲ್ಲದ ಸಂಬಂಧಗಳನ್ನು ಕಲ್ಪಿಸಿಕೊಂಡು ಗಾಸಿಪ್​ ಕ್ರಿಯೇಟ್ ಮಾಡುತ್ತಿರುತ್ತಾರೆ ಎಂದರು.

ಅಮರ್​ಸಿಂಗ್​ ಅವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ತಾವು ಹಾಗೂ ಅಮರ್​ಸಿಂಗ್​ ಆಪ್ತವಾಗಿರುವ ರೀತಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಇಲ್ಲಸಲ್ಲದ ಸುದ್ದಿಗಳನ್ನು ಹರಡಿದ್ದರು. ಇದರಿಂದ ಮನನೊಂದು ತಾನು ಬದುಕನ್ನೇ ಕೊನೆಗೊಳಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಆತ್ಮಹತ್ಯೆಗೆ ಯೋಚಿಸಿದ್ದೆ. ಆದರೆ ಚಿಕಿತ್ಸೆ ಮುಗಿಸಿಕೊಂಡು ಬಂದ ಅಮರ್​ಸಿಂಗ್​ ಮತ್ತೆ ನನಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು ಎಂದು ಹೇಳಿದ್ದಾರೆ.

ಇದೇವೇಳೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧಂಭೀರ ಆರೋಪ ಮಾಡಿರುವ ಜಯಪ್ರದಾ, ಆಜಂ ಖಾನ್ ತನ್ನ ಮೇಲೆ ಆಸಿಡ್​ ದಾಳಿ ನಡೆಸಲು ಯತ್ನಿಸಿದ್ದರು. ಜತೆಗೆ ಅವರಿಂದ ಪ್ರಾಣ ಬೆದರಿಕೆ ಇತ್ತು. ಇದರಿಂದ ಪ್ರತಿ ಬಾರಿ ತಾವು ಮನೆಯಿಂದ ಹೊರಹೋಗುವಾಗ ಜೀವಂತವಾಗಿ ಮರಳುತ್ತೇನೆಯೇ ಎಂಬ ಆತಂಕದಲ್ಲಿ ತೆರಳುತ್ತಿದ್ದೆ ಎಂದು ಹೇಳಿದ್ದಾರೆ.

Jaya Prada Says She Thought Of Suicide After Morphed Pictures Went Viral

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ