ಶ್ರೀ ಗುರೂಶ್ರೀ ವಿದ್ಯಾಕೇಂದ್ರ ಶಾಲೆಗೆ ರಾಜ್ಯಮಟ್ಟದ ಗಣರಾಜ್ಯೋತ್ಸವದ ಪುರಸ್ಕಾರ

ಬೆಂಗಳೂರು-70ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೊಡ್ಡ      ಬಿದರಕಲ್ಲಿನ ಶ್ರೀ ಗುರೂಶ್ರೀ ವಿದ್ಯಾಕೇಂದ್ರದ 600 ಮಕ್ಕಳು ಭಾಗವಹಿಸಿದ್ದರು. ಈ ಮಕ್ಕಳು ಭಾರತೀಯ ಮನ,ಭಾರತೀಯ ಜನ ಒಂದೇ ಎಂಬುದನ್ನು ಸಾರುವ ಐಕ್ಯತಾ ಸಂದೇಶ ಹೊತ್ತ ನೃತ್ಯವನ್ನು ಪ್ರದರ್ಶಿಸಿದರು.

ಮಾನ್ಯ ಘನವೆತ್ತ ರಾಜ್ಯಪಾಲರಾದ ವಜುಬಾಯಿ ವಾಲಾರವರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಶಾಲೆಯ ಆಡಳಿತಾಧಿಕಾರಿಯಾದ ಶ್ರೀನಾಥ್ ಅವರಿಗೆ ಬಹುಮಾನ ನೀಡಿ ಪುರಸ್ಕರಿಸಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ