ಕೇಂದ್ರ  ಬಜೆಟ್ ಮಂಡಿಸಿದ ಸಚಿವ ಗೋಯಲ್ ಗೆ ವಿತ್ತ ಸಚಿವ ಜೇಟ್ಲಿ ಅಭಿನಂದನೆ

ವಾಷಿಂಗ್ಟನ್​​​: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್ ಡಿಎ ಸರ್ಕಾರದ ಕೊನೆ ಹಾಗೂ ಮಧ್ಯಂತರ ಬಜೆಟ್​ ಮಂಡನೆ ಮಾಡಿದ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಅವರಿಗೆ ಹಣಕಾಸು ಸಚಿವ ಅರುಣ್​​ ಜೇಟ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವಿತ್ತ ಸಚಿವ ಅರುಣ್​ ಜೇಟ್ಲಿ ಸರಣಿ ಟ್ವೀಟ್​ ಮಾಡಿದ್ದು, ಅತ್ಯದ್ಬುತ ಬಜೆಟ್​ ಮಂಡನೆ ಮಾಡಿರುವ ಗೋಯಲ್​ ಹಾಗೂ ಪ್ರಧಾನಿ ಮೋದಿಯವರಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ.

2014ರಿಂದ 2019ರವರೆಗೆ ಮಂಡನೆಯಾಗಿರುವ ಪ್ರತಿ ಬಜೆಟ್​​ನಲ್ಲೂ ಮಧ್ಯಮ ವರ್ಗದವರಿಗೆ ರಿಲೀಫ್​ ನೀಡಲಾಗಿದ್ದು, ರೈತರು, ಕೆಳವರ್ಗ ಹಾಗೂ ಕಾರ್ಮಿಕ ವರ್ಗವನ್ನ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ