ಹಣ ಸುಲಿಗೆ ಆರೋಪ: ಮೂವರು ಪತ್ರಕರ್ತರು ಹಾಗೂ ಪೊಲೀಸ್ ಇನ್ಸ್‍ಪೆಕ್ಟರ್ ಬಂಧನ

ನೊಯ್ಡಾ(ಉ.ಪ್ರ.), ಜ.30- ಲಂಚ ಮತ್ತು ಹಣ ಸುಲಿಗೆ ಆರೋಪದ ಮೇಲೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ಮೂವರು ಪತ್ರಕರ್ತರು ಮತ್ತು ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8 ಲಕ್ಷ ರೂ. ನಗದು, ಪಿಸ್ತೂಲ್ ಮತ್ತು ಮರ್ಸಿಡಿಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಸೆಕ್ಟರ್-20 ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮನೋಜ್ ಕುಮಾರ್ ಪಂತ್ ಹಾಗೂ ಪತ್ರಕರ್ತರಾದ ಸುಶೀಲ್ ಪಂಡಿತ್, ಉದಿತ್ ಗೋಯೆಲ್ ಮತ್ತು ರಮಣ್‍ಠಾಕೂರ್‍ನನ್ನು ನಿನ್ನೆ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಎಸ್‍ಪಿ) ವೈಭವ್ ಕೃಷ್ಣ ತಿಳಿಸಿದ್ದಾರೆ.

ಕಾಲ್‍ಸೆಂಟರ್ ಮಾಲೀಕನ ಹೆಸರನ್ನು ಎಫ್‍ಐಆರ್‍ನಿಂದ ತೆಗೆದು ಹಾಕಲು ಇವರು ಸೆಕ್ಟರ್-20 ಪೊಲೀಸ್ ಠಾಣೆಯಲ್ಲಿ ಉದ್ಯಮಿಯಿಂದ ಲಂಚ ಮತ್ತು ವಸೂಲಿ ಹಣ ಸ್ವೀಕರಿಸುತ್ತಿದ್ದಾಗ ಸ್ಥಳದಲ್ಲೇ ಈ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್‍ಎಸ್‍ಪಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ