ಇಂಡಿಯಾ ಎ, ಇಂಗ್ಲೆಂಡ್ ಲೈಯನ್ಸ್ ಪಂದ್ಯದ ವೇಳೆ ಜೇನು ದಾಳಿ 15 ನಿಮಿಷ ಪಂದ್ಯ ಸ್ಥಗಿತ

ತಿರುವನಂತಪುರಂ: ಇಂಡಿಯಾ ಎ ಮತ್ತು ಇಂಗ್ಲೆಂಡ್ ಲೈಯನ್ಸ್ ನಡುವಿನ ನಾಲ್ಕನೆ ಪಂದ್ಯದ ವೇಳೆ ಜ್ಜೇನು ಹುಳಗಳ ದಾಳಿ ನಡೆಸಿದ ಘಟನೆ ನಡೆದಿದ್ದು ಸುಮಾರು 15 ನಿಮಿಷಗಳ ಕಾಲ ಪಂದ್ಯವನ್ನ ಸ್ಥಗಿತಗೊಳಿಸಲಾಗಿತ್ತು.

ಇಲ್ಲಿನ ಗ್ರೀನ್ ಫೀಲ್ಡ್‍ನಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 28ನೇ ಓವರ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಜೇನು ದಾಳಿಯಿಂದ ಮೈದಾನದಲ್ಲಿದ್ದ ಕಲ ಕ್ರಿಕೆಟ್ ಅಭಿಮಾನಿಗಳು ಸಣ್ಣ ಮಟ್ಟಿಗೆ ಗಾಯಗೊಂಡಿದ್ದಾರೆ. ಜೇನು ದಾಳಿಯಿಂದ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡ ಸುರಕ್ಷತೆಗಾಗಿ ಮೈದಾನ ಒಳಗೆ ಓಡಿ ಹೋದರು. ಜೇನು ದಾಳಿಗೆ ಮೈದಾನದಲ್ಲಿದ್ದ ಕೆಲ ಅಭಿಮಾನಿಗಳು ಜೇನು ಗೂಡಿಗೆ ಕಲ್ಲು ಹೊಡೆದಿದ್ದೆ ಕಾರಣ ಎರಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ