ನಾಳೆ ಕೂಲಿ ಕಾರ್ಮಿಕರ ಸಂಘದಿಂದ ಗಣರಾಜ್ಯೋತ್ಸವ ಕಾರ್ಯಕ್ರಮ

ಬೆಂಗಳೂರು, ಜ.25-ಕರ್ನಾಟಕ ರಾಜ್ಯ ವಿವಿಧ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾರತ ಗಣರಾಜ್ಯೋತ್ಸವ 2019 ಸಂವಿಧಾನ ದಿನ ಹಾಗೂ ಸಂಘದ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ನಾಳೆ ಬೆಳಿಗ್ಗೆ 9 ಗಂಟೆಗೆ ಆರ್.ಟಿ.ನಗರದ ರಾಧಾಕೃಷ್ಣ ಟಾಕೀಸ್ ಬಳಿ ಇರುವ ಮಠದ ಹಳ್ಳಿ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಐಪಿಎಸ್ ಡಾ.ಚೇತನ್‍ಸಿಂಗ್ ರಾಥೋಡ್ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಬಿ.ಎಸ್.ಸುರೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ.

ರಾಜ್ಯಾಧ್ಯಕ್ಷ ಬಿ.ಎಲ್. ಪರಮೇಶ್, ಉಪಾಧ್ಯಕ್ರಾದ ಪಿ.ರಾಮಚಂದ್ರಯ್ಯ,ಮ ಎಸ್.ಪ್ರಕಾಶ್, ಜಂಟಿ ಕಾರ್ಯದರ್ಶಿ ಅನಂಗಜೀ, ಹರೀಶ್‍ಕುಮಾರ್ ಬಿ.ಎನ್, ಹೆಬ್ಬಾಳ ಕ್ಷೇತ್ರದ ಅಧ್ಯಕ್ಷ ಪರಮೇಶ್ವರರಾವ್ ಸಿಂಧಿ, ಖಜಾಂಚಿ ಬಿ.ಎಲ್.ಬಾಲರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ