ಡಾ.ಎಲ್.ನಾರಾಯಣರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವ ಕೃಷಣಬೈರೇಗೌಡ

ಬೆಂಗಳೂರು, ಜ.14-ಸಾವಯವ ಕೃಷಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಡಾ.ಎಲ್.ನಾರಾಯಣರೆಡ್ಡಿ ಅವರ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸಂತಾಪ ಸೂಚಿಸಿದ್ದಾರೆ.

ಪ್ರಯೋಗಗಳ ಮೂಲಕ ಪಾರಂಪರಿಕ ಕೃಷಿಯ ದಿಕ್ಕನ್ನು ಬದಲಿಸಿದ ನಾರಾಯಣರೆಡ್ಡಿ ಅವರು ಸಹಜ ಕೃಷಿ ಅಳವಡಿಸಿಕೊಂಡು ರೈತ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಕೃಷಿ ಅವಲಂಬಿತ ಯುವಜನರಿಗೆ ಅವರು ಮಾದರಿ ಎಂದು ಹೇಳಿದ್ದಾರೆ.

ಅವರ ನಿಧನದಿಂದ ಕೃಷಿ ಕ್ಷೇತ್ರ ಒಬ್ಬ ಅಸಾಧಾರಣ ಕೃಷಿ ಸಾಧಕರನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ