ಬಿಡಿಎ ಅಧ್ಯಕ್ಷರಾಗಿ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ನಾಮನಿರ್ದೇಶನ ಮಾಡಲು ಅನುಮೋದನೆ ನೀಡಿದ ಸಿಎಂ

ಬೆಂಗಳೂರು, ಜ.9-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನುಮೋದನೆ ನೀಡಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್ ಅವರು, ತಮ್ಮನ್ನು ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಅನುಮೋದನೆ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಈ ಸಂಬಂಧದ ಕಡತ ನಗರಾಭಿವೃದ್ಧಿ ಇಲಾಖೆಗೆ ರವಾನೆಯಾಗಿದೆ ಎಂದು ಹೇಳಿದ್ದಾರೆ. ತಮ್ಮನ್ನು ಬಿಡಿಎ ಅಧ್ಯಕ್ಷರಾಗಿ ಮಾಡಬಾರದೆಂದು ನಮ್ಮ ಪಕ್ಷದವರ್ಯಾರೂ ಕೂಡ ತಡೆಹಿಡಿದಿರಲಿಲ್ಲ.

ಈಗಾಗಲೇ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಸ್ಪಷ್ಟಪಡಿಸಿದ್ದರು. ನಾಮನಿರ್ದೇಶನ ಮೊದಲ ಪಟ್ಟಿಯಲ್ಲಾದರೇನು, ಎರಡನೇ ಪಟ್ಟಿಯಲ್ಲಾದರೇನು ಎಲ್ಲಾ ಒಂದೇ ಅಲ್ಲವೇ? ಯಾವ ಕಾರಣಕ್ಕೆ ತಮ್ಮ ನಾಮನಿರ್ದೇಶನ ವಿಳಂಬವಾಗಿತ್ತು ಎಂಬುದಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಲಿಲ್ಲ. ನಾಮನಿರ್ದೇಶನಕ್ಕೆ ಸಂಬಂಧಪಟ್ಟ ಆದೇಶ ನೀಡಿದರೆ ಇಂದೇ ಅಧಿಕಾರ ಸ್ವೀಕರಿಸಲು ಸಿದ್ಧ. ಸಂಕ್ರಾಂತಿಯವರೆಗೂ ಕಾಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ