ಬರೋಡಾ ವಿರುದ್ಧ ಕರ್ನಾಟಕ ತಂಡಕ್ಕೆ ವಿರೋಚಿತ ಸೋಲು

ವಡೋದರಾ: ಬರೋಡಾ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ೨ ವಿಕೆಟ್‌ಗಳ ವಿರೋಚಿತ ಸೋಲು ಅನುಭವಿಸಿದೆ.

ವಡೋದರಾದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ನೀಡಿದ್ದ ೧೧೦ ರನ್‌ಗಳ ಸುಲಭ ಸವಾಲನ್ನ ಬರೋಡಾ ಪ್ರಯಾಸಪಟ್ಟು ೮ ವಿಕೆಟ್‌ಗಳನ್ನ ಕಳೆದುಕೊಂಡು ಎರಡು ವಿಕೆಟ್‌ಗಳ ರೋಚಕ ಗೆಲುವು ಪಡೆಯಿತು.ಕ

ಎರಡನೇ ದಿನಾದಾಟದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ಮುಂದುವರೆಸಿದ ಕರ್ನಾಟಕ ತಂಡ ೨೨೦ ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಓಪನರ್ ಸಿದ್ದಾರ್ಥ್ ಮತ್ತು ನಾಯಕ ಮನೀಶ್ ಪಾಂಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಲಾ ಅರ್ಧ ಶತಕ ಸಿಡಿಸಿದ್ರು. ಇದರ ನೆರವಿನಿಂದ ಕರ್ನಾಟಕ ತಂಡ ೧೦೯ ರನ್‌ಗಳ ಮುನ್ನಡೆ ಪಡೆಯುವಂತಾಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಬರೋಡಾ ಕರ್ನಾಟಕ ಬೌಲರ್‌ಗಳೆದುರು ಪರದಾಡಿತು. ಮನೀಷ್ ಪಡೆಯ ಬೌಲರ‍್ಸ್‌ಗಳು ಕರಾರುವಕ್ ದಾಳಿ ಮಾಡಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಬರೋಡ ತಂಡದ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಮನೀಷ್ ಪಡೆ ಪರ ಎಂ.ಪ್ರಸಿದ್ಧ ಕೃಷ್ಣ ೩, ರೋನಿತ್ ಮೋg ಮತ್ತು ಶ್ರೇಯಸ್ ಗೋಪಾಲ್ ತಲಾ ೨ ವಿಕೆಟ್ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ