ಅಭಿಮಾನಿಗಳ ಬಳಿ ಕ್ಷಮೆ ಕೋರಿದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಇತ್ತಿಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಜೊತೆ ಭಾಗವಹಿಸಿದ್ರು. ಕಾರ್ಯಕ್ರಮದಲ್ಲಿ ಕರಣ್ ಜೊಹರ್ ಕೇಳಿದ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಕೊಟ್ಟ ಉತ್ತರಗಳು ಕ್ರಿಕೆಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ವಿರಾಟ್ ಕೊಹ್ಲಿ ಅಥವಾ ಸಚಿನ್ ತೆಂಡೂಲ್ಕರ್ ಇವರಿಬ್ಬರಲ್ಲಿ ಯಾರು ಸರ್ವ ಶ್ರೇಷ್ಠ ಬ್ಯಾಟ್ಸ್‍ಮನ್ ಎಂದು ಕೇಳಿದಾಗ ಹಾರ್ದಿಕ್ ಮತ್ತು ರಾಹುಲ್ ವಿರಾಟ್ ಕೊಹ್ಲಿ ಎಂದು ಹೇಳಿ ಎಲ್ಲರಿಗೂ ಅಚ್ಚರಿ ನೀಡಿದ್ದರು. ಇದು ಸಚಿನ್ ಅಭಿಮಾನಿಗಳನ್ನ ಕೆರೆಳಿಸಿತ್ತು. ಇದು ಸಾಲದೆಂಬಂತೆ ಹಾರ್ದಿಕ್ ಕಪ್ಪು ಮಹಿಳೆಯರ ಕುರಿತು ಜನಾಂಗೀಯ ನಿಂದೆನೆ ಮಾಡಿದ್ದು ಸಖತ್ ವೈರಲ್ ಆಗಿತ್ತು.

ಇದೀಗ 25 ವರ್ಷದ ಹಾರ್ದಿಕ್ ಪಾಂಡ್ಯ, ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನನ್ನ ಕಮೆಂಟ್‍ಗಳಿಂದ ನಾನು ನೊವು ಮಾಡಿದ್ದರೆ ನಾನು ಕ್ಷಮೆ ಕೇಳುತ್ತೇನೆ ಅಂಥ ಪಶ್ಚಾತಾಪಪಟ್ಟುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ