ಐವರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು, ಜ.9-ಐವರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ ಅವರನ್ನು  ಅದೇ ಸ್ಥಳದಲ್ಲೇ ನಿಯುಕ್ತಿಗೊಳಿಸಿದೆ.

ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಬಡ್ತಿ ನೀಡಿ ಕೋಲಾರ ಗೋಲ್ಡ್ ಫೀಲ್ಡ್‍ನ ಎಸ್ಪಿಯಾಗಿ ಮುಂದುವರೆಸಲಾಗಿದೆ. ಕೆ.ಪಿ.ಬಾಲಕೃಷ್ಣ -ಎಸ್ಪಿ  ಗುಪ್ತದಳ (ಆಡಳಿತ), ಪಿ.ರಾಜೇಂದ್ರ ಪ್ರಸಾದ್- ಎಸ್ಪಿ ವೈರ್‍ಲೆಸ್ ಬೆಂಗಳೂರು, ಆರ್. ರಮೇಶ್- ಡೆಪ್ಯುಟಿ ಕಮಾಂಡೆಂಟ್ ಜನರಲ್ ಹೋಂ ಗಾಡ್ರ್ಸ್ ಅವರಿಗೆ ಆಯ್ಕೆ ವಿಭಾಗವನ್ನು ಕೂಡ ವಹಿಸಲಾಗಿದೆ.

ಡಾ.ಕೋನಾ ವಂಶಿ ಕೃಷ್ಣ ಅವರನ್ನು ತುಮಕೂರು ಜಿಲ್ಲೆಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಸ್ಥಾನದಲ್ಲಿದ್ದ ದಿವ್ಯಾ ಗೋಪಿನಾಥ್ ಅವರು ರಜೆಯ ಮೇಲೆ ತೆರಳಿರುವುದರಿಂದ ಮೈಸೂರಿನ ಕರ್ನಾಟಕ ಪೆÇಲೀಸ್ ಅಕಾಡೆಮಿಯಲ್ಲಿದ್ದ ವಂಶಿ ಕೃಷ್ಣ ಅವರಿಗೆ ಎಸ್ಪಿಯಾಗಿ ಈ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ