ಎರಡು ದಿನ ಭಾರತ್ ಬಂದ್, ಸಾರಿಗೆ ಇಲಾಖೆಗೆ ಭಾರೀ ನಷ್ಟ

ಬೆಂಗಳೂರು,ಜ.9-ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆಯುತ್ತಿರುವ ಭಾರತ್ ಬಂದ್ ಹಿನ್ನಲೆ,

ನಿನ್ನೆಯಿಂದ ಬಹುತೇಕ ರಾಜ್ಯದೆಲ್ಲೆಡೆ ಬಸ್‍ಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ಇಲಾಖೆಗೆ ದೊಡ್ಡ ಮಟ್ಟದಲ್ಲಿಯೇ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಹಾವೇರಿ ವಿಭಾಗದಿಂದ 40 ಲಕ್ಷ ರೂ., ಉತ್ತರ ಕನ್ನಡದಿಂದ 50 ಲಕ್ಷ ರೂ., ಹಾಸನ 26 ಲಕ್ಷ ರೂ., ಚಿಕ್ಕಮಗಳೂರು 25 ಲಕ್ಷ ರೂ., ರಾಮನಗರ 30 ಲಕ್ಷ ರೂ., ಕೋಲಾರ 34 ಲಕ್ಷ ರೂ., ಮಂಗಳೂರು 50 ಲಕ್ಷ ರೂ., ಕೊಪ್ಪಳ 20 ಲಕ್ಷ ರೂ., ಉತ್ತರ ಕನ್ನಡ 40 ಲಕ್ಷ ರೂ.

ಬೆಳಗಾವಿ 65 ಲಕ್ಷ ರೂ., ದಾವಣಗೆರೆ 30 ಲಕ್ಷ ರೂ. ಹಾಗೂ ರಾಯಚೂರಿನಿಂದ 70 ಲಕ್ಷ ರೂ. ನಷ್ಟ ಉಂಟಾಗಿದೆ. ಇನ್ನು ಒಂದೇ ದಿನ ಈಶಾನ್ಯ ಸಾರಿಗೆ ಸಂಸ್ಥೆಗೆ 9 ಕೋಟಿ ರೂ. ನಷ್ಟ ಉಂಟಾಗಿದೆ.

ಆಯಾ ವಿಭಾಗಗಳಲ್ಲಿನ ಸಾರಿಗೆ ಸಂಸ್ಥೆಯ ನಷ್ಟದ ಬಗ್ಗೆ ಅಲ್ಲಿನ ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಷ್ಟ್ರವ್ಯಾಪಿ ಮುಷ್ಕರ ಎರಡನೇ ದಿನವು ನಡೆಯುತ್ತಿದ್ದು, ಇಂದು ಹಲವೆಡೆ ಸರ್ಕಾರಿ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಕಾರಣ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಇಂದು ಕೂಡ ಸಾರಿಗೆ ಇಲಾಖೆಯ ಆದಾಯದಲ್ಲಿ ಭಾರಿ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ