ಶ್ರೀರಾಮಪುರದ ಸೋಮಶೇಖರ್ ಎಂಬ ವ್ಯಕ್ತಿಯ ಕಣ್ಮರೆ

ಬೆಂಗಳೂರು,ಜ.8- ಶ್ರೀರಾಮಪುರದ 4ನೇ ಮುಖ್ಯರಸ್ತೆಯಿಂದ  ಸೋಮಶೇಖರ್(48) ಎಂಬುವರು ನಾಪತ್ತೆಯಾಗಿದ್ದು, ಇವರಬಗ್ಗ ಮಾಹಿತಿ ಇದ್ದಲ್ಲಿ ಕೂಡಲೇ ಪೆÇಲೀಸ್ ಕಂಟ್ರೋಲ್ ರೂಂಗಾಗಲಿ ಅಥವಾ ಸ್ಥಳೀಯ ಠಾಣೆಗಾಗಲಿ ತಿಳಿಸಲು ಕೋರಲಾಗಿದೆ.
ಜ.2ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸೋಮಶೇಖರ್ ಮನೆಯಿಂದ ಹೊರಗೆ ಹೋದವರು ವಾಪಸ್ಸಾಗದೆ ಕಣ್ಮರೆಯಾಗಿದ್ದಾರೆ.

ಇವರ ಸಹೋದರ ಶ್ರೀನಿವಾಸ್ ಎಂಬುವರು ಎಲ್ಲ ಕಡೆ ವಿಚಾರಿಸಲಾಗಿ ಇವರ ಸುಳಿವು ಸಿಗದ ಕಾರಣ ಜ.5ರಂದು ಠಾಣೆಗೆ ದೂರು ನೀಡಿದ್ದಾರೆ.
ಮನೆಯಿಂದ ಹೊರಗೆ ಹೋದಾಗ ಕಪ್ಪು ಬಣ್ಣದ ಪ್ಯಾಂಟು,ಕ್ರೀಮ್ ಬಣ್ಣದ ತುಂಬುತೋಳಿನ ಶರ್ಟ್ ಧರಿಸಿದ್ದರು.  ಕನ್ನಡ, ತೆಲುಗು ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಮೊ: 9164335895 ಅಥವಾ 8904332321 ಈ ನಂಬರ್‍ಗೆ  ತಿಳಿಸಲು ಕೋರಲಾಗಿದೆ.

ಮಹಿಳೆ ಕಾಣೆ:
ಭಾಷ್ಯಂನಗರದ 4ನೇ ಕ್ರಾಸ್ ನಿವಾಸಿ ವರಲಕ್ಷ್ಮಿ(49) ಎಂಬುವರು ಡಿ.24ರಂದು ವೇಲೂರಿನಲ್ಲಿರುವ ಅಕ್ಕನ ಮನೆಗೆ  ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಅಕ್ಕನ ಮನೆಗೂ ಹೋಗದೆ, ಮನೆಗೆ ವಾಪಸ್  ಆಗದೆ ಕಾಣಿಯಾಗಿದ್ದಾರೆ ಎಂದು ಇವರ  ಪತಿ ಮಾಣಿಕ್ಯಂ ಠಾಣೆಗೆ  ದೂರು ನೀಡಿದ್ದಾರೆ.

ಕನ್ನಡ, ತಮಿಳು ಭಾಷೆ ಮಾತನಾಡುವ ಈ ಮಹಿಳೆ ಬಲಗೈ ಮೊಣಕೈಯಲ್ಲಿ ಹಳೆಯ ಸುಟ್ಟ ಗಾಯದ ಗುರುತಿದೆ.
ಈ ಮಹಿಳೆ ಬಗ್ಗೆ ಸುಳಿವಿದ್ದಲ್ಲಿ ಶ್ರೀರಾಮಪುರ ಪೆÇಲೀಸ್ ಠಾಣೆಗಾಗಲಿ ಅಥವಾ ಕಂಟ್ರೋಲ್ ರೂಂಗೆ ತಿಳಿಸಲು ಮನವಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ