ಬೆಂಗಳೂರಿನ ಜನತೆ ಭಾರತ್ ಬಂದ್‍ಗೆ ಆತಂಕ ಪಡುವ ಆವಶ್ಯಕತೆಯಿಲ್ಲ

ಬೆಂಗಳೂರು. ಜ 07. ನಾಳೆ ಎಂದಿನಂತೆಆಟೋ ಮತ್ತು ಟ್ಯಾಕ್ಸಿಗಳು ಸಂಚಾರ ನಡೆಸಲಿವೆ ಮತ್ತು ಮೆಟ್ರೋ ಸಂಚಾರ ಎಂದಿನಂತೆಇರುವುದರಿಂದ ನಗರದಜನತೆದೂರದ ಪ್ರಯಾಣಅಥವಾ ಹತ್ತಿರದ ಪ್ರಯಾಣಕ್ಕೆಆತಂಕ ಪಡುವಂತಿಲ್ಲ. ಪಿವಿಅರ್, ಸಿನಿಮ ಮಂದಿರಗಳು ಮತ್ತು ಮಾಲ್‍ಗಳು ಎಂದಿನಂತೆಕಾರ್ಯ ನಿರ್ವಹಿಸುವದರಿಂದ ಮನರಂಜನೆ ಮತ್ತುತರಕಾರಿ ಮತ್ತುಇನ್ನಿತರ ಪದಾರ್ಥಗಳ ಖರೀದಿಗೆಯಾವುದೇತೊಂದರೆಯಿರುವುದಿಲ್ಲ.

ಹೊರಊರಿಗೆ ಪ್ರಯಾಣ ಮಾಡುವವರುರೈಲಿನ ಮೂಲಕ ಪ್ರಯಾಣ ಮಾಡಬಹುದು.ಊಟ, ತಿಂಡಿ ಮತ್ತು ಕಾಪಿ, ಟೀಗಳಿಗೆ ಇಂದಿರಾಕ್ಯಾಂಟೀನ್ ಮತ್ತುಇತರ ಹೋಟೆಲ್‍ಗಳು ಎಂದಿನಂತೆಕಾರ್ಯ ನಿರ್ವಹಿಸುವದರಿಂದಜನತೆಗೆಯಾವುದೇ ಸಮಸ್ಯೆಉಂಟಾಗುವುದಿಲ್ಲ.

ನಾಳೆ ನಡೆಯುವ ಬಂದ್‍ಗೆ ಈ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿಲ್ಲ:
ಐಟಿ-ಬೀಟಿ ಸಂಘಟನೆಗಳ ಬೆಂಬಲವಿಲ್ಲ
ಪಿವಿಅರ್, ಸಿನಿಮ ಮಂದಿರಗಳು ಮತ್ತು ಮಾಲ್‍ಗಳ ಬೆಂಬಲವಿಲ್ಲ.
ಕರ್ನಾಟಕ ಸಂಘಟನೆಗಳ ಒಕ್ಕೂಟದ ಬೆಂಬಲವಿಲ್ಲ.
ಕರ್ನಾಟಕರಕ್ಷಣಾ ವೇದಿಕೆ ಮತ್ತು ವಾಟಾಳ್ ಪಕ್ಷದ ಬೆಂಬಲವಿಲ್ಲ.
ಬೆಂಗಳೂರು ಆಟೋ ಮತ್ತುಟ್ಯಾಕ್ಸಿಚಾಲಕರಒಕ್ಕೂಟದ ಬೆಂಬಲವಿಲ್ಲ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ