ಜ.12ರಂದು ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಪ್ರಯುಕ್ತ, ನಮೋ ಭಾರತ ವತಿಯಿಂದ ನಮೋತನ್ ರನ್ ಫಾರ್ ನರೇಂದ್ರ ಅಭಿಯಾನ ಆಯೋಜನೆ

ಬೆಂಗಳೂರು, ಜ.5- ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ನಮೋ ಭಾರತ ವತಿಯಿಂದ ನಮೋತನ್ ರನ್ ಫಾರ್ ನರೇಂದ್ರ ಅಭಿಯಾನವನ್ನು ಜ.12ರಂದು ಬೆಳಗ್ಗೆ 5.30ಕ್ಕೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ತಿಪ್ಪರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಓಟ ಪ್ರಾರಂಭವಾಗಿ ಪಂಪಮಹಾಕವಿ ರಸ್ತೆ, ರಾಮಕೃಷ್ಣ ಆಶ್ರಮ ವೃತ್ತ ಮೂಲಕ ಸಾಗಲಿದೆ. ಒಟ್ಟು 4.9ಕಿ.ಮೀ.ಕ್ರಮಿಸಿ ವಾಪಸ್ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ ಎಂದು ಹೇಳಿದರು.

ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕೆಂಬ ಉದ್ದೇಶದಿಂದ ಈ ಓಟ ಹಮ್ಮಿಕೊಂಡಿದ್ದು, ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ರಾಜವರ್ಧನ್‍ಸಿಂಗ್ ರಾಥೋಡ್ ಉದ್ಘಾಟಿಸುವರು.ಅದಮ್ಯ ಚೇತನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ತೇಜಸ್ವಿನಿ ಅನಂತ್‍ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಆಸಕ್ತರು 365 ರೂ.ಪ್ರವೇಶ ಶುಲ್ಕ ಕಟ್ಟಿ ಹೆಸರು ನೋಂದಾಯಿಸಬೇಕು.ದೇಶ ಭಕ್ತರು ಹಾಗೂ ಅಭಿಮಾನಿಗಳು ಪಾಲ್ಗೊಳ್ಳಬಹುದು.ಹೆಚ್ಚನ ಮಾಹಿತಿಗೆ ದೂ.ಸಂ. 9481317437 ಹಾಗೂ ವೆಬ್‍ಸೈಟ್ www.namobharath.in ಸಂಪರ್ಕಿಸಬಹದು ಎಂದು ತಿಪ್ಪರಾಜು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶ್ರೀನಿವಾಸ್, ಚೇತನ್‍ಕುಮಾರ್, ನೀರಜ್, ಸುಪ್ರಿಯ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ