ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ-ಎಸ್ಟಿ ಬ್ಯಾಕ್ಲ್ಯಾಗ್ ಹುದ್ದೆಗಳನ್ನು ಜ.9ರವೊಳಗೆ ಸಂದರರ್ಶನದ ದಿನಾಂಖ ನಿಗದಿ ಪಡಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಸಮತಾ ಸೈನಿಕ ದಳ

ಬೆಂಗಳೂರು,ಜ.5-ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿನ ಎಸ್ಸಿ-ಎಸ್ಟಿ ಬ್ಯಾಕ್‍ಲ್ಯಾಗ್ ಹುದ್ದೆಗಳನ್ನು ಜ.9ರೊಳಗಾಗಿ ಸಂದರ್ಶನ ದಿನಾಂಕವನ್ನು ನಿಗದಿಪಡಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ಸಮತಾ ಸೈನಿಕ ದಳ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಸೈನಿಕ ದಳದ ಅಧ್ಯಕ್ಷಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ಕರ್ನಾಟಕದ ಎಲ್ಲಾ ವಿವಿಗಳಲ್ಲಿನ ಎಸ್ಸಿಎಸ್ಟಿ ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬಬೇಕೆಂದು ಹೈಕೋರ್ಟ್ ತೀರ್ಪು ಇದ್ದರೂ ಸಹ ಹುದ್ದೆಗಳನ್ನು ತುಂಬುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಬ್ಯಾಕ್‍ಲ್ಯಾಗ್ ಹುದ್ದೆಗಳನ್ನು ತುಂಬದೆ ದಲಿತ ಜನಾಂಗಕ್ಕೆ ದ್ರೋಹ ಬಗೆಯಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆದ್ದರಿಂದ ಜ.9ರೊಳಗೆ ಹುದ್ದೆಗಳನ್ನು ತುಂಬದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ದಲಿತ ಸೇನೆ ಅಧ್ಯಕ್ಷ ಆ.ಕೇಶವಮೂರ್ತಿ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ , ದಲಿತ ಸೇನಾ ಸಮಿತಿ ಅಧ್ಯಕ್ಷ ಜೆ.ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ