ನನಗೆ ಓಡಾಡಲೂ ಭಯವಾಗುತ್ತಿದೆ ಹಾಗಾಗಿ ತಮಗೆ ನೀಡಿರುವ ಭದ್ರತೆ ಹೆಚ್ಚಿಸಿ: ತೇಜ್​ ಪ್ರತಾಪ್​ ಯಾದವ್​

ಪಟನಾ: ನನಗೆ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು” ಎಂದು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಅವರ ಪುತ್ರ ತೇಜ್​ ಪ್ರತಾಪ್​ ಯಾದವ್​​ ತಮಗೆ ನೀಡಿರುವ ಭದ್ರತೆ ಹೆಚ್ಚಿಸುವಂತೆ ಸಿಎಂ ನಿತೀಶ್​ ಕುಮಾರ್​ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ತೇಜ್ ಪ್ರತಾಪ್, ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಉಲ್ಲೇಖಿಸಿದ ತೇಜ್​, “ಯಾರು ಯಾರನ್ನಾದರೂ ಕೊಲ್ಲಬಹುದೆಂದು ನನಗೆ ಭಯವಾಗುತ್ತಿದೆ. ಪ್ರತಿನಿತ್ಯ ಕೊಲೆಗಳು ಜರುಗುತ್ತಿವೆ. ನನಗೆ ಒದಗಿಸಿರುವ ಭದ್ರತೆಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರನ್ನು ವಿನಂತಿಸಿದ್ದೇನೆ ಎಂದಿದ್ದಾರೆ.

ಡಿ.30ರಂದು ಔರಂಗಾಬಾದ್​ನಲ್ಲಿ ಉಗ್ರರು ವ್ಯಕ್ತಿಯೊಬ್ಬನನ್ನು ಕೊಂದು, ನಾಲ್ಕು ಬಸ್​ಗಳನ್ನು ಸುಟ್ಟಿದ್ದರು. ಕೆಲವೊಮ್ಮೆ ಭದ್ರತೆಗೆ ಬಾಡಿಗಾರ್ಡ್ಸ್​ಗಳೂ ಸಾಲುವುದಿಲ್ಲ ಎನಿಸುತ್ತದೆ ಎಂದರು.

“Anyone Can Kill Anybody”: Tej Pratap Yadav Says He Needs More Security

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ