ರಾಜ್ಯಸಭೆಯಲ್ಲಿ ಕಾವೇರಿ ವಿವಾದ ಪ್ರತಿಧ್ವನಿ; ಎಐಎಡಿಎಂಕೆಯಿಂದ ಪ್ರತಿಭಟನೆ

ನವದೆಹಲಿ: ಹೊಗೆನಕಲ್​ ಬಳಿ ಪರ್ಯಾಯ ಡ್ಯಾಂ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕಾರ್ಯಸಾಧು ವರದಿ ನೀಡಲು ಕೇಂದ್ರ ಕರ್ನಾಟಕಕ್ಕೆ ಕೋರಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ವಿರೋಧಿಸಿದೆ.

ಇದೇ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಎಐಎಡಿಎಂಕೆ ಸದಸ್ಯರು ಸಂಸತ್​ ಭವನದ ಮುಂದಿರುವ  ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಜಲಮಂಡಳಿ ಹಾಗೂ ಜಲಸಂಪನ್ಮೂಲ ಇಲಾಖೆ ನಿರ್ಧಾರವನ್ನ ಎಐಎಡಿಎಂಕೆ ವಿರೋಧಿಸಿದೆ.
ಈ ನಡುವೆ ರಾಜ್ಯಸಭೆಯಲ್ಲಿ ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ