ಹೆಣ್ಣೂರು ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ

ಬೆಂಗಳೂರು, ಡಿ.19- ಮೈಸೂರಿನಿಂದ ಬೆಂಗಳೂರಿನಲ್ಲಿರುವ ಅತ್ತೆ ಮನೆಗೆ ಬಂದು ಸರಅಪಹರಣ, ಮನೆಗಳ್ಳತನ ನಡೆಸುತ್ತಿದ್ದಕುಖ್ಯಾತ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 15 ಲಕ್ಷರೂ.ಬೆಲೆಬಾಳುವ 15 ಚಿನ್ನದ ಸರಗಳು ಹಾಗೂ ಸ್ಕೂಟರ್‍ಅನ್ನು ವಶಪಡಿಸಿಕೊಂಡಿದ್ದಾರೆ.

ಹೆಣ್ಣೂರು ಠಾಣೆಯ ಹಳೆ ಆರೋಪಿ ಸುಹೇಲ್ ಪಾಷ (24) ಬಂಧಿತ ಆರೋಪಿಯಾಗಿದ್ದು, ಈತ ಮೈಸೂರಿನ ಕಲ್ಯಾಣಗಿರಿಯ ಗೌಸಿಯಾ ನಗರದ ನಿವಾಸಿ.
ಈತ ಟ್ಯಾನರಿರಸ್ತೆಯಲ್ಲಿರುವ ತನ್ನ ಅತ್ತೆ ಮನೆಗೆ ಆಗಾಗ್ಗೆ ಬರುತ್ತಿದ್ದನು. ಈ ವೇಳೆ ನಗರದಲ್ಲಿ ಸರ ಅಪಹರಣ, ಮನೆಗಳ್ಳತನ ಮಾಡುತ್ತಿದ್ದನಲ್ಲದೆ ಮೈಸೂರಿನಲ್ಲಿಯೂ ಸಹ ಸರ ಅಪಹರಣ ಮಾಡಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದನು.

ನಗರದಲ್ಲಿ ಸರ ಅಪಹರಣ ಪ್ರಕರಣಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದ ಹೆಣ್ಣೂರು ಪೊಲೀಸರು ಕೊನೆಗೂ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನ ಬಂಧನದಿಂದ ಹೆಣ್ಣೂರು ಠಾಣೆಯ ಆರು ಸರಗಳ್ಳತನ ಪ್ರಕರಣ, ಬಾಣಸವಾಡಿ ಐದು, ಇಂದಿರಾನಗರ, ಪುಲಿಕೇಶಿನಗರ, ನಜರ್‍ಬಾದ್ ಹಾಗೂ ಡಿಜೆ ಹಳ್ಳಿ ಠಾಣೆಯ ಪ್ರಕರಣಗಳು ಪತ್ತೆಯಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ